ವಿಪರ್ಯಾಸ
September 15th, 2008.
- ನವೀನ್ ಭಟ್, ಗಂಗೋತ್ರಿ,ಶಿರಸಿ
ನನ್ನೊಳಗೇ ಹುಟ್ಟಿ
ಉಸಿರುಗಟ್ಟಿ ಸತ್ತ
ಅವಳ ಸಮಾಧಿಯ ಮೇಲೆ
ಅವಳಿಗೇ ಕೊಡಬೇಕೆಂದಿದ್ದ
ಕೆಂಗುಲಾಬಿಯೊಂದನಿಟ್ಟು
ಮೂಕವಾಗಿ ಅಳುತ್ತಿದ್ದೇನೆ
ನಾನು ಕೊಂದೆನಾ?
ಅವಳೇ ಸತ್ತಳಾ?
ಗೊತ್ತಿಲ್ಲದಿದ್ದರೂ….
ನಾನಂತೂ ಅನುಕ್ಷಣವೂ
ಸಾಯುತ್ತಿದ್ದೇನೆ ಅವಳಿಗಾಗಿ
ನಾನು ಬಯಸಿರಲಿಲ್ಲ
ಅವಳೇ ನನ್ನೊಳಗೆ ಚಿಗುರಿದಳು
ನಾನು ಚಿವುಟಲಿಲ್ಲ
ಆದರೆ…..ನೀರೆರೆಯಲೂ ಇಲ್ಲ
ಮೊಗ್ಗು ಬಿಟ್ಟ ಲತೆ
ಹೂವರಳಿಸುವ ಮುನ್ನ
ಬತ್ತಿ ಹೋದ ಬಗ್ಗೆ,
ನನ್ನ ನೋವು ಅದಮ್ಯ
ಹಳೆ ನೆನಪುಗಳ ಮಂಜು ಕವಿದು
ಕಾಣದಾಗಿದೆ ಗಮ್ಯ