’ಸುನಾಮಿ’
September 15th, 2008.
- ಪೂರ್ಣಿಮಾ ಜಿ. ಹೆಗಡೆ, ಭಟ್ಕಳ
ಬದುಕು ಭವಿಷ್ಯವ ಕಳೆದು,
ಕಹಿ ವಾಸ್ತವ ಕಣ್ಣೆದುರೇ ತೆರೆದು,
ಸುತ್ತ ಮುತ್ತೆಲ್ಲ ಮೌನ ಕವಿದು
ಬದುಕು ಬೀದಿಗೆ ಬಿದ್ದಿದೆ!
ಕಾತರ ಕನವರಿಕೆಗಳೆಲ್ಲಾ ಕಳೆದು
ಹೊಸತನದ ಸುಳಿವಿಲ್ಲ,
ಅದೆಷ್ಟೋ ಜೀವಗಳಿಗೆ ಬದುಕು
ಬರಡಾದ ಗಳಿಗೆಯೂ ಅರಿವಿಲ್ಲ!
ಮತ್ತೆಂದೂ ತಲೆಯ ಮೇಲೊಂದು
ಸೂರು ದಕ್ಕುವ ಖಾತರಿಯಿಲ್ಲ
’ಸಹಾಯ ಹಸ್ತ’ದ ನಡುವೆ ಗುಂಡಿಗಳಿವೆಯಲ್ಲ!
ಅಳಿದು-ಉಳಿದವರ ಬದುಕು ಬಾಡುತಿಹುದಲ್ಲ!
ಭೋರ್ಗರೆದ ’ಸುನಾಮಿ’ ಎಲ್ಲ ಮುಗಿಸಿ ಹೋಯಿತಲ್ಲ!