ಬೇರು
September 15th, 2008.
-ಮಾನಸತೇಜ, ಮೈಸೂರು
ತನುವು ತನುವಾಗಿ
ನಶಿಸುತ್ತಿದೆ…..
ನಶೆಯಿಂದಲಿ ತಾನೇ….
ಆಶಿಸುತಿದೆ
ವ್ಯರ್ಥ ಪಷಣೆ…! ||
ಕರಗಿ ಕಲ್ಲು ಮಣ್ಣು,
ಮರದಿ ಬೆಳೆದ ಹಣ್ಣು…….
ಮಣ್ಣಾಗುವುದು ಮತ್ತೆ……!
ಮತ್ತೆ ಚೇತನಕೆ ಸಾಕ್ಷಿ,
’ಸಾಕ್ಷಿ’ ತನಗೆ ತಾನೇ ತಾನೆ?
ಅರಿವಾದರೆ ಜ್ಞಾನ.
ಅನುಭೂತಿಯ ಸಾಕ್ಷಾತ್ಕಾರ ||
ಅಲ್ಲಿಯವರೆಗೆ
ತನುವು ತನುವಾಗಿ
ನಶಿಸುತಿದೆ …..
ನಶೆಯಿಂದಲಿ ತಾನೇ…
ಆಶಿಸುತ್ತಿದೆ ವ್ಯರ್ಥ ಪೋಷಣೆ… !