<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	>

<channel>
	<title>Chaitrarashmi : ಚೈತ್ರರಶ್ಮಿ : A Ray Of Hope :</title>
	<atom:link href="http://www.chaitrarashmi.com/feed" rel="self" type="application/rss+xml" />
	<link>http://www.chaitrarashmi.com</link>
	<description>ಸೃಜನ ಶೀಲತೆಯ ಹುಡುಕಾಟದಲ್ಲಿ</description>
	<pubDate>Sat, 01 Jan 2011 07:07:27 +0000</pubDate>
	<generator>http://wordpress.org/?v=2.6.1</generator>
	<language>en</language>
			<item>
		<title>ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರು</title>
		<link>http://www.chaitrarashmi.com/antarangadinda/%e0%b2%a8%e0%b2%ae%e0%b3%8d%e0%b2%ae-%e0%b2%87%e0%b2%82%e0%b2%a6%e0%b2%bf%e0%b2%97%e0%b2%be%e0%b2%97%e0%b2%bf-%e0%b2%a4%e0%b2%ae%e0%b3%8d%e0%b2%ae-%e0%b2%a8%e0%b2%be%e0%b2%b3%e0%b3%86%e0%b2%97</link>
		<comments>http://www.chaitrarashmi.com/antarangadinda/%e0%b2%a8%e0%b2%ae%e0%b3%8d%e0%b2%ae-%e0%b2%87%e0%b2%82%e0%b2%a6%e0%b2%bf%e0%b2%97%e0%b2%be%e0%b2%97%e0%b2%bf-%e0%b2%a4%e0%b2%ae%e0%b3%8d%e0%b2%ae-%e0%b2%a8%e0%b2%be%e0%b2%b3%e0%b3%86%e0%b2%97#comments</comments>
		<pubDate>Sat, 01 Jan 2011 07:07:27 +0000</pubDate>
		<dc:creator>ಸಂಪಾದಕ</dc:creator>
		
		<category><![CDATA[ಅಂತರಂಗದಿಂದ]]></category>

		<category><![CDATA[ಭಗತ್ ಸಿಂಗ್]]></category>

		<category><![CDATA[ರಾಜಗುರು]]></category>

		<category><![CDATA[ಸುಖದೇವ್]]></category>

		<category><![CDATA[Bhagath Singh]]></category>

		<category><![CDATA[freedom]]></category>

		<category><![CDATA[India]]></category>

		<category><![CDATA[martyr]]></category>

		<category><![CDATA[Rajguru]]></category>

		<category><![CDATA[sukhdev]]></category>

		<guid isPermaLink="false">http://www.chaitrarashmi.com/?p=499</guid>
		<description><![CDATA[
ಮಾರ್ಚ್ 23, ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತೀಯ ದಾಸ್ಯಮುಕ್ತಿಗಾಗಿ ಜೀವನವನ್ನೇ ಬಲಿದಾನಗೈದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ಹುತಾತ್ಮರಾದ ದಿನ. ಇಂದಿಗೆ ಈ ವೀರಯೋಧರು ದೇಶಕ್ಕಾಗಿ ಜೀವತೆತ್ತು 79 ವರ್ಷಗಳು ಸಂದಿವೆ. ಇಂದು ನಾವು ದೇಶದ ಒಳಿತಿಗೆ ಶ್ರಮಿಸಿದರೆ ಅದೇ ಈ ವೀರರಿಗೆ ನೀಡುವ ಅತ್ಯುನ್ನತ ಗೌರವ.
&#8211;ರಾಚಂ

&#8220;ಮೇರಾ ರಂಗ್ ದೇ , ಮಾಯಿ ರಂಗ್ ದೇ, ಮೇರಾ ರಂಗ್ ದೇ ಬಸಂತೀ ಚೋಲಾ&#8230;&#8221; ಹಾಗೊಂದು [...]]]></description>
			<content:encoded><![CDATA[<blockquote>
<p style="TEXT-ALIGN: center"><em>ಮಾರ್ಚ್ 23, ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತೀಯ ದಾಸ್ಯಮುಕ್ತಿಗಾಗಿ ಜೀವನವನ್ನೇ ಬಲಿದಾನಗೈದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ಹುತಾತ್ಮರಾದ ದಿನ. ಇಂದಿಗೆ ಈ ವೀರಯೋಧರು ದೇಶಕ್ಕಾಗಿ ಜೀವತೆತ್ತು 79 ವರ್ಷಗಳು ಸಂದಿವೆ. ಇಂದು ನಾವು ದೇಶದ ಒಳಿತಿಗೆ ಶ್ರಮಿಸಿದರೆ ಅದೇ ಈ ವೀರರಿಗೆ ನೀಡುವ ಅತ್ಯುನ್ನತ ಗೌರವ.</em></p>
<p style="TEXT-ALIGN: left"><em>&#8211;ರಾಚಂ</em></p>
<p><strong></strong></p></blockquote>
<p style="TEXT-ALIGN: left">&#8220;ಮೇರಾ ರಂಗ್ ದೇ , ಮಾಯಿ ರಂಗ್ ದೇ, ಮೇರಾ ರಂಗ್ ದೇ ಬಸಂತೀ ಚೋಲಾ&#8230;&#8221; ಹಾಗೊಂದು ಹಾಡು ಲಾಹೋರ್ ನ ಜೈಲಿನ ಗೋಡೆ ಗೋಡೆ ಗಳಲ್ಲಿ ಅನುರಣಿಸುತ್ತಾ, ಕೇಳಿದವರ ಎದೆಯಲ್ಲಿ ಹೊಸತೊಂದು ಭಾವ ಸೃಷ್ಟಿಸುತ್ತಾ ಸೆರೆಮನೆಯ ಎಲ್ಲೆಯನ್ನು ದಾಟಿ ಮಾರ್ದನಿಸುತ್ತಿತ್ತು. ಆ ಹಾಡು ಲಾಹೋರಿನ ಜೈಲಿನಲ್ಲಿ ಖೈದಿಗಳಿಗಾಗಿ ಏರ್ಪಡಿಸಿದ್ದ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮದ್ದಾಗಲಿ,  ಸಂಗೀತ ಗೋಷ್ಠಿಯದ್ದಾಗಲಿ ಆಗಿರಲಿಲ್ಲ. ದೇಶಭಕ್ತಿಯ ಮಹಾಪರಾಧಕ್ಕಾಗಿ ನೇಣಿನ ಶಿಕ್ಷೆಗೆ ಒಳಗಾದ ಮೂವರು ಭಾರತೀಯ ಯುವಕರು ತಮ್ಮ ಬಲಿದಾನದ ಸಮಯ ಹತ್ತಿರವಾಯಿತೆಂದು ಸಂಭ್ರಮದಿಂದ ಆನಂದದಿಂದ ಹೇಳತೊಡಗಿದ್ದ ಹಾಡದು. ಸಾಯಲು ಹೊರಟವರಿಂದ ಸಂಭ್ರಮದ ಹಾಡು!</p>
<p>ತಾಯ ವಿಮೋಚನೆಗಾಗಿ, ಸ್ವಾತಂತ್ರ್ಯದ ಕನಸು ಕಂಡ ಆ ಮೂವರು ಭಾರತೀಯ ಯುವಕರಿಗೆ ಬ್ರಿಟಿಷ್ ಸರ್ಕಾರ ನೀಡಿದ್ದು ಗಲ್ಲು ಶಿಕ್ಷೆಯ ಉಡುಗೊರೆ. ನ್ಯಾಯಾಲಯದ ತೀರ್ಪಿನ ಪ್ರಕಾರ ಮರುದಿನ ಗಲ್ಲಿಗೇರಿಸಬೇಕಿತ್ತಾದರೂ ದೇಶಾಭಿಮಾನಿಗಳ ಪ್ರತಿಭಟನೆಗೆ ಹೆದರಿ ಬ್ರಿಟಿಷ್ ಸರ್ಕಾರ ಒಂದು ದಿನ ಮುಂಚೆಯೇ ಅವರನ್ನು ನೇಣಿ ಗೇರಿಸಲು ನಿರ್ಧರಿಸಿತ್ತು. ಸೆರೆಮನೆಯ ಅಧಿಕಾರಿಗಳು ಆ ಯುವಕರಿಗೆ ಈ ವಿಷಯ ತಿಳಿಸಿದಾಗ ಅವರಿಗೋ ಅತ್ಯಾನಂದ. ಆ ಮೂವರು ಗೆಳೆಯರಲ್ಲೂ ಪೈಪೋಟಿ - ತಮ್ಮಲ್ಲಿ ಮೊದಲು ಗಲ್ಲಿಗೇರುವ ಅವಕಾಶ ಯಾರದಿರಬೇಕು ಎಂಬ ಸಲುವಾಗಿ! ಅವರಿಗದು ಮಾತೃಭೂಮಿಯ ಮುಕ್ತಿಗಾಗಿ ಬಲಿದಾನಗೈಯ್ಯುವ ಭಾಗ್ಯ!</p>
<p>ಪ್ರತ್ಯಕ್ಷ ಸಾವಿನ ಎದುರು ನಿಂತಾಗಲೂ ಅವರಲ್ಲಿ ಭಯದ ಲವಲೇಶವೂ ಇಲ್ಲ. ಗಲ್ಲಿನ ವೇದಿಕೆ ಏರಿದಾಗಲೂ ಮುಖದಲ್ಲಿ ನಗು. ಇನ್ನು ಕೆಲವೇ ಕ್ಷಣಗಳಲ್ಲಿ ತಮ್ಮ ಜೀವ ತೆಗೆವ ನೇಣಿನ ಕುಣಿಕೆಯನ್ನು ಅವರು ಚುಂಬಿಸಿದರು. ಮನದಲ್ಲಿ ಅದೇನನ್ನೋ ಸಾಧಿಸಿದ ತೃಪ್ತಿ. ಮೊಗದಲ್ಲಿ ಚೈತನ್ಯದ ಚಿಲುಮೆ. ಸಾಯಲು ಹೊರಟವರ ಮುಖದಲ್ಲಿ ನಗು. ಬ್ರಿಟಿಷ್ ಅಧಿಕಾರಿಗಳಿಗೆ ಅತ್ಯಾಶ್ಚರ್ಯ. ಅಲ್ಲಿದ್ದವರು ಐದು ಮಂದಿ ಬ್ರಿಟಿಷ್ ಅಧಿಕಾರಿಗಳು. ಒಬ್ಬ ಬ್ರಿಟಿಷ್ ಅಧಿಕಾರಿ ಕೇಳಿದ &#8216;ಯಾಕೆ ನಗುತ್ತಿದ್ದೀರಿ?&#8217; ಬಲಿದಾನಕ್ಕೆ ಸಿದ್ಧನಾದ ಯುವಕರಲ್ಲಿ ಒಬ್ಬ ಹೇಳಿದ &#8220;ಸಾರ್ ನೀವು ಅದೃಷ್ಟವಂತರು!&#8221; ಬ್ರಿಟಿಷ್ ಅಧಿಕಾರಿಗೆ ಮತ್ತಷ್ಟು ಅಚ್ಚರಿ . &#8216;ಕ್ಷಣದಲ್ಲಿ ಹೆಣವಾಗಿ ಉರುಳುವ ನೀವು ನಮ್ಮ ಅದೃಷ್ಟವನ್ನೇಕೆ ಹೊಗಳ್ತೀರಿ?&#8217; ಆತನ ಪ್ರಶ್ನೆ. ಅದಕ್ಕೆ ಆ ಭಾರತೀಯ ಯುವಕ ನಗುತ್ತಲೇ ಉತ್ತರಿಸುತ್ತಾನೆ. &#8220;ತನ್ನ ತಾಯ್ನಾಡಿನ ಮುಕ್ತಿಗಾಗಿ, ಸ್ವಾತಂತ್ರ್ಯದ ಕನಸಿಗಾಗಿ ಈ ನಾಡಿನ ಯುವಕ ಅದೆಷ್ಟು ಆನಂದದಿಂದ, ಸಂತೋಷದಿಂದ, ಸಂಭ್ರಮದಿಂದ ಬಲಿದಾನ ಮಾಡ್ತಾನೆ, ಅದನ್ನು ನೋಡುವ ಅದೃಷ್ಟ 30 ಕೋಟಿ ಭಾರತೀಯರಲ್ಲಿ ನಿಮಗೆ ಐದು ಜನರಿಗೆ ಮಾತ್ರ ಸಿಗ್ತಿರೋದು , ನೀವು ಅದೃಷ್ಟವಂತರು!&#8221;</p>
<p>ಎಂತಹ ತಾಕತ್ತಿನ ಮಾತದು. ಸಾವಿನ ಸಮ್ಮುಖದಲ್ಲೂ ಅಂದು ಹಾಗೆ ದಿಟ್ಟ ವಾಗಿ ಮಾತಾಡಿದವನು ನಮ್ಮೆಲ್ಲರ ಪ್ರೀತಿಯ ಸರ್ದಾರ್ ಭಗತ್ ಸಿಂಗ್. ಜತೆಗಿದ್ದವರು ಅವನಷ್ಟೇ ಉಜ್ವಲ ದೇಶಭಕ್ತಿ, ಸ್ವಾತಂತ್ರ್ಯದ ಕನಸನ್ನು ಎದೆಯೊಳಗಿಟ್ಟುಕೊಂಡಿದ್ದ ಸುಖದೇವ್ ಮತ್ತು ಶಿವರಾಂ ರಾಜಗುರು.</p>
<p>ಅಂದು 23 ಮಾರ್ಚ್ 1931. ಇನ್ನೂ ತಾರುಣ್ಯದ ಹೊಸ್ತಿಲಲ್ಲಿದ್ದ ಭಗತ್ ಸಿಂಗ್, ಸುಖದೇವ್, ರಾಜಗುರು ಈ ನಮ್ಮ ಭಾರತದ ದಾಸ್ಯ ವಿಮೋಚನೆಗಾಗಿ, ತಮ್ಮ ಮಾತೃಭೂಮಿಯ ಅಗಾಧ ಪ್ರೀತಿ, ಉಜ್ವಲ ದೇಶಭಕ್ತಿಯ ಕಾರಣಕ್ಕಾಗಿ ನಗುನಗುತ್ತಲೇ ನೇಣಿಗೇರಿದ ದಿನ. &#8216;ಈ ದೇಶಕಾಗಿ ಸಾಯಲೂ ಸಿದ್ಧ&#8217; ಅನ್ನೋದು ಕೇವಲ ಮಾತಲ್ಲ, ಈ ದೇಶದ ಯುವಕರು ಮಾತೃಭೂಮಿಯ ಒಳಿತಿಗಾಗಿ ಸಾವಿಗೂ ಸವಾಲು ಹಾಕಬಲ್ಲರು ಎಂಬುದನ್ನು ಜಗತ್ತಿಗೇ ನಿರೂಪಿಸಿ ಸಾಧಿಸಿ ತೋರಿಸಿದ ದಿನ. ಅಂದು ಅವರಿಗಿದ್ದದ್ದು ಭಾರತದ ದಾಸ್ಯ ವಿಮೋಚನೆ ಹಾಗೂ ಸ್ವತಂತ್ರ ಭಾರತದ ಕನಸು ಮಾತ್ರ. ನಾವು ಸ್ವತಂತ್ರರಾಗಿ, ದಾಸ್ಯಮುಕ್ತರಾಗಿ ಇರುವ ಇಂದಿನ ಈ ದಿನಗಳಿಗಾಗಿ ಅವರು ತಮ್ಮ ಸುಂದರ ನಾಳೆಗಳನ್ನು ಬಲಿಕೊಟ್ಟಾಗ , ತಾಯ್ನಾಡಿಗಾಗಿ ನಗುನಗುತ್ತಾ ನೇಣಿಗೇರಿದಾಗ ಭಗತ್ ಸಿಂಗ್ ಗೆ ಕೇವಲ 23 ವರ್ಷ, ಸುಖದೇವ್ ಗೆ 27 ವರ್ಷ ಹಾಗೂ ರಾಜಗುರು ಗೆ 25 ವರ್ಷ! ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತೀಯ ಆನಂದ, ದಾಸ್ಯಮುಕ್ತಿಯನ್ನೇ ಜೀವನದ ಧ್ಯೇಯವಾಗಿಸಿ ಕೊಂಡವರು ಅವರು. ಜಗತ್ತಿನ ಸ್ವಾತಂತ್ರ್ಯ ಇತಿಹಾಸದಲ್ಲೇ ಅವರದು ಧೀರೋದಾತ್ತ ಅಧ್ಯಾಯ. ಇನ್ನೂ ಶತ ಶತಮಾನಗಳವರೆಗೆ ಭಾರತೀಯ ಯುವಕರಿಗೊಂದು ಆದರ್ಶ, ಅನುಪಮ ಮಾದರಿ, ಉಜ್ವಲ ಮಾರ್ಗದರ್ಶಿ.</p>
<p>ಮನೆಯಲ್ಲಿ ಮದುವೆ ಮಾಡುತ್ತೇನೆಂದಾಗ &#8216;ಭಾರತದ ಸ್ವಾತಂತ್ರ್ಯವೇ ನನ್ನ ಮದುವೆ&#8217; ಎಂದು ಪತ್ರ ಬರೆದಿಟ್ಟು ಮನೆಯಿಂದ ಹೊರಬಂದು ಸಂಪೂರ್ಣ ತನ್ನನ್ನೇ ದೇಶಕ್ಕಾಗಿ ಸಮರ್ಪಿಸಿಕೊಂಡ ಭಗತ್, ದೇಶಾಭಿಮಾನವನ್ನೇ ತಮ್ಮ ರಕ್ತದ ಕಣಕಣ ದಲ್ಲಿ ತುಂಬಿಕೊಂಡು, ದೇಶಭಕ್ತಿಯನ್ನೇ ಉಸಿರಾಡುತ್ತಾ ಬಲಿದಾನದ ಸಮಯ ಬಂದಾಗ &#8216;ನಾನು ಮೊದಲು ನಾನು ಮೊದಲು&#8217; ಎಂದು ಪೈಪೋಟಿಗಿಳಿದು ನಗು ನಗುತ್ತಾ ನೇಣಿ ಗೇರಿದ ಸುಖದೇವ್, ರಾಜಗುರು &#8230; ಎಂತಹ ವೀರ ಪರಂಪರೆಯ ಮಕ್ಕಳು ನಾವು! ಆದರೆ ನಮ್ಮಲ್ಲೇಕಿಂದು ಆತ್ಮ ವಿಸ್ಮೃತಿಯ ಕರಿನೆರಳು? ನಾವಿಂದು ಬಲಿದಾನಗೈಯಬೇಕಿಲ್ಲ. ಮನೆ ಮಠ ಸಂಸಾರ ಬಿಟ್ಟು ಬರಬೇಕಿಲ್ಲ. ಯೌವನ, ಬದುಕನ್ನು ತ್ಯಾಗ ಮಾಡಬೇಕಿಲ್ಲ. ಆದರೆ ಕನಿಷ್ಟ ದೇಶವನ್ನು ಪ್ರೀತಿಸಲಾರೆವಾ? ದೇಶದ ಒಳಿತಿಗೆ ಸ್ಪಂದಿಸಲಾರೆವಾ? ಆ ವೀರ ಬಲಿದಾನಿಗಳ ಬಗ್ಗೆ ನಮ್ಮ ಮಕ್ಕಳಿಗೆ ಹೇಳಲಾರೆವಾ? ನಮ್ಮ ಈ ವೀರ ಪರಂಪರೆಯ ಬಗ್ಗೆ ಅಭಿಮಾನ ಮೂಡಿಸಲಾರೆವಾ? ಈ ದೇಶದ ರೈತ, ಗಡಿಕಾಯುವ ಸೈನಿಕರ ಕುರಿತು ಕಿಂಚಿತ್ತೂ ಕಾಳಜಿ ಹೊಂದಲಾರೆವಾ? ಅಷ್ಟೂ ಮಾಡಲಾಗದಿದ್ದರೆ ಸುಖಾಸುಮ್ಮನೆ ಈ ದೇಶಕ್ಕೆ ಬೈಯ್ಯೋದು ಬಿಟ್ಟು, ಈ ದೇಶವನ್ನು ಟೀಕಿಸೋದು ಬಿಟ್ಟು, ದೇಶಕ್ಕಾಗಿ ಕೆಲಸ ಮಾಡುತ್ತಿರುವವರ ಕಾಲೆಳೆಯೋದು ಬಿಟ್ಟು ಸುಮ್ಮನಿರಲಾರೆವಾ?</p>
<p>ದೇಶಕ್ಕಾಗಿ ನಾವೇನೂ ಮಾಡಬೇಕಿಲ್ಲ. ನನ್ನ ಹಳ್ಳಿ, ನನ್ನ ಊರು, ನನ್ನ ಜನ, ನನ್ನ ಸುತ್ತಮುತ್ತಲಿನ ಸಮಾಜಕ್ಕಾಗಿ ಸ್ಪಂದಿಸುವುದೇ, ತುಡಿಯುವುದೇ, ಸಮಾಜದ ಒಳಿತಿಗೆ ಶ್ರಮಿಸುವುದೇ ನಾವಿಂದು ಮಾಡಬೇಕಾದ ಕಾರ್ಯ. ಅದೇ ದೇಶ ಕಟ್ಟುವ ಕೆಲಸ.</p>
<p>ಭಗತ್ ಸಿಂಗ್,ರಾಜಗುರು , ಸುಖದೇವ್ ರ ಬಲಿದಾನದ ಈ ದಿನ ಅಂತಹದೊಂದು ಸಂಕಲ್ಪ ಮಾಡೋಣ. ಇಲ್ಲದಿದ್ದರೆ ಮತ್ತೊಂದು ಮಾರ್ಚ್ 23 ಬರುತ್ತದೆ, ಹೋಗುತ್ತದೆ. ಮತ್ತು ನಾವು ಒಂದೊಂದೇ ವರ್ಷ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತೇವೆ . ಅಷ್ಟೇ!<strong><br />
 </strong></p>
]]></content:encoded>
			<wfw:commentRss>http://www.chaitrarashmi.com/antarangadinda/%e0%b2%a8%e0%b2%ae%e0%b3%8d%e0%b2%ae-%e0%b2%87%e0%b2%82%e0%b2%a6%e0%b2%bf%e0%b2%97%e0%b2%be%e0%b2%97%e0%b2%bf-%e0%b2%a4%e0%b2%ae%e0%b3%8d%e0%b2%ae-%e0%b2%a8%e0%b2%be%e0%b2%b3%e0%b3%86%e0%b2%97/feed</wfw:commentRss>
		</item>
		<item>
		<title>ಕಲಾತತ್ವ ಮಹರ್ಷಿ  ಆನಂದ ಕುಮಾರಸ್ವಾಮಿ</title>
		<link>http://www.chaitrarashmi.com/specialarticles/%e0%b2%95%e0%b2%b2%e0%b2%be%e0%b2%a4%e0%b2%a4%e0%b3%8d%e0%b2%b5-%e0%b2%ae%e0%b2%b9%e0%b2%b0%e0%b3%8d%e0%b2%b7%e0%b2%bf-%e0%b2%86%e0%b2%a8%e0%b2%82%e0%b2%a6-%e0%b2%95%e0%b3%81%e0%b2%ae%e0%b2%be</link>
		<comments>http://www.chaitrarashmi.com/specialarticles/%e0%b2%95%e0%b2%b2%e0%b2%be%e0%b2%a4%e0%b2%a4%e0%b3%8d%e0%b2%b5-%e0%b2%ae%e0%b2%b9%e0%b2%b0%e0%b3%8d%e0%b2%b7%e0%b2%bf-%e0%b2%86%e0%b2%a8%e0%b2%82%e0%b2%a6-%e0%b2%95%e0%b3%81%e0%b2%ae%e0%b2%be#comments</comments>
		<pubDate>Fri, 31 Dec 2010 11:21:40 +0000</pubDate>
		<dc:creator>ರಾಚಂ</dc:creator>
		
		<category><![CDATA[ವಿಶೇಷ ಲೇಖನಗಳು]]></category>

		<category><![CDATA[Ananda Kumara Swamy]]></category>

		<category><![CDATA[ಸೂರ್ಯಪ್ರಕಾಶ ಪಂಡಿತ್]]></category>

		<category><![CDATA[ಆನಂದ ಕುಮಾರಸ್ವಾಮಿ]]></category>

		<category><![CDATA[Suryaprakasha Pandit]]></category>

		<guid isPermaLink="false">http://www.chaitrarashmi.com/?p=436</guid>
		<description><![CDATA[ - ಎಸ್. ಸೂರ್ಯಪ್ರಕಾಶ ಪಂಡಿತ್ 
ಭಾರತೀಯ ಕಲಾಕೃತಿಗಳನ್ನು ಕಂಡು ವಿದೇಶಿಯರು ಅನಾಗರಿಕವೆಂದು ಮೂದಲಿಸುತ್ತಿದ್ದ ಕಾಲದಲ್ಲಿ , ಜಗತಿನ ಉಳಿದೆಲ್ಲ ಕಳಪ್ರಕಾರಗಳಿಗಿಂತ ಭಾರತೀಯ ಕಲೆ ಮಿಗಿಲಾದುದೆಂದು ನಿರೂಪಿಸಿದವರು ಕಲಾತತ್ವ ಮಹರ್ಷಿ ಆನಂದ ಕುಮಾರಸ್ವಾಮಿ. 
ಬದುಕಿನ ಬಹುಭಾಗ ಭಾರತದಿಂದ ಹೊರಗೇ ಕಳೆದರೂ ಭಾರತೀಯ ಕಲೆ ಸಂಸ್ಕೃತಿಗಳ ಕುರಿತು ಪಶ್ಚಿಮ ದೇಶಗಳಲ್ಲಿ ಗೌರವವನ್ನೂ, ಅಭಿಮಾನವನ್ನೂ ಮೂಡಿಸಿದ ಕಲಾತಪಸ್ವಿ. ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳದೆ ಅದರ ಕುರಿತು ಅಪಾರ್ಥ ಕಲ್ಪಿಸುತ್ತಿದ್ದ ವಿಶ್ವವಿದ್ಯಾನಿಲಯಗಳ ವಿದ್ವಾಂಸರು ಹಾಗೂ ಪಾಶ್ಚಿಮಾತ್ಯ ವಿಮರ್ಶಕರಿಗೆ ಸೆಡ್ಡು ಹೊಡೆದು ಧರ್ಮ ಹಾಗೂ ಂ ತಿU [...]]]></description>
			<content:encoded><![CDATA[<p> <span style="color: #000000; font-family: Tunga;"><span style="color: #000000; font-family: Tunga;"><strong>- ಎಸ್. ಸೂರ್ಯಪ್ರಕಾಶ ಪಂಡಿತ್</strong></span></span> </p>
<p style="margin: 0.0001pt; text-align: left;"><span style="color: #000000; font-family: Tunga;">ಭಾರತೀಯ ಕಲಾಕೃತಿಗಳನ್ನು ಕಂಡು ವಿದೇಶಿಯರು ಅನಾಗರಿಕವೆಂದು ಮೂದಲಿಸುತ್ತಿದ್ದ ಕಾಲದಲ್ಲಿ , ಜಗತಿನ ಉಳಿದೆಲ್ಲ ಕಳಪ್ರಕಾರಗಳಿಗಿಂತ ಭಾರತೀಯ ಕಲೆ ಮಿಗಿಲಾದುದೆಂದು ನಿರೂಪಿಸಿದವರು ಕಲಾತತ್ವ ಮಹರ್ಷಿ ಆನಂದ ಕುಮಾರಸ್ವಾಮಿ. </span></p>
<p style="margin: 0.0001pt; text-align: left;"><span style="color: #000000; font-family: Tunga;">ಬದುಕಿನ ಬಹುಭಾಗ ಭಾರತದಿಂದ ಹೊರಗೇ ಕಳೆದರೂ ಭಾರತೀಯ ಕಲೆ ಸಂಸ್ಕೃತಿಗಳ ಕುರಿತು ಪಶ್ಚಿಮ ದೇಶಗಳಲ್ಲಿ ಗೌರವವನ್ನೂ, ಅಭಿಮಾನವನ್ನೂ ಮೂಡಿಸಿದ ಕಲಾತಪಸ್ವಿ. ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳದೆ ಅದರ ಕುರಿತು ಅಪಾರ್ಥ ಕಲ್ಪಿಸುತ್ತಿದ್ದ ವಿಶ್ವವಿದ್ಯಾನಿಲಯಗಳ ವಿದ್ವಾಂಸರು ಹಾಗೂ ಪಾಶ್ಚಿಮಾತ್ಯ ವಿಮರ್ಶಕರಿಗೆ ಸೆಡ್ಡು ಹೊಡೆದು ಧರ್ಮ ಹಾಗೂ ಂ ತಿU ಹೊಸ ಬಾs ? ಬgದೆ ಬಾs gತಿ ಂi ಂ ತಿಂi </span><span style="color: #000000; font-family: Tunga;">ಸತ್ವ ಹಾಗೂ ಮಹತ್ವಗಳನ್ನು ಜಗತ್ತಿಗೇ ಸಾರಿ ಹೇಳಿದ ಈ ಕಾಲದ ಋಷಿ. ಈ </span><span style="color: #000000; font-family: Tunga;">ದೀ ವು ಂv ವು ಷಿ ಂi ಜೀನ zಶ ವ ನ vರೆ ದಿ ಟ್ಟಿದ್ದಾg ಅಬಿe P ನ ದ</span> </p>
<p style="margin: 0.0001pt; text-align: left;"><span style="color: #000000; font-family: Tunga;">ರಾ?ವೊಂದರ ನಿರ್ಮಾಣವು ಕವಿ ಮತ್ತು ಕಲಾವಿದರಿಂದಲೇ ಹೊರತು ಉದ್ಯಮಿಗಳು ಅಥವಾ ರಾಜಕಾರಣಿಗಳಿಂದಲ್ಲ; ಬದುಕಿನ ಗಹನವಾದ ಮೌಲ್ಯಗಳು ಕಲೆಯಲ್ಲಿ ಮಾv ನಿಕ್ಷಿಪ್ತವಾಗಿರಬಲ್ಲವು.</span></p>
<p style="margin: 0.0001pt; text-align: left;"><span style="color: #000000; font-family: Tunga;">ದಿಟವಾದ ಸ್ವದೇಶೀ ಎಂಬುದು ಜೀವನವನ್ನು ನೋಡುವ ಒಂದು ದೃಷ್ಟಿ. ಇದೊಂದು ಪ್ರಾಮಾಣಿಕತೆಯೂ ಹೌದು. ಮೊದಲು ಇದನ್ನು ತಿಳಿದು, ಜೀವನಕಲೆಯನ್ನು ಮತ್ತೊಮ್ಮೆ ಸಿದ್ದಿಸಿಕೊಳ್ಳಬೇಕಾಗಿದೆ. </span></p>
<p style="margin: 0.0001pt; text-align: left;"><span style="color: #000000; font-family: Tunga;">&#8220;ಸ್ವದೇಶೀ ಎಂಬುದು ಒಂದು ರಾಜಕೀಯ ಅಸ್ತ್ರವಲ್ಲ; ಅದೊಂದು ಧಾರ್ಮಿಕ ಕಲಾದರ್ಶ&#8221;.</span></p>
<p style="margin: 0.0001pt; text-align: left;"><span style="color: #000000; font-family: Tunga;">&#8220;ಪ್ರತಿಯೊಬ್ಬ ಮಾನವನ ಕೊನೆಯ ಹಂತವೆಂದರೆ ದೈವಾನುಭವವೇ. ಆದುದರಿಂದ, ನಮ್ಮ ಎಲ್ಲ</span></p>
<p style="margin: 0.0001pt; text-align: left;"><span style="color: #000000; font-family: Tunga;">ಚಟುವಟಿಕೆಗಳೂ ಈ ಅಂತಿಮ ಗುರಿಯತ್ತಲೇ ಮುಖಮಾಡಿರತಕ್ಕದ್ದು&#8221;. </span></p>
<p style="margin: 0.0001pt; text-align: left;"><span style="color: #000000; font-family: Tunga;">&#8220;ಸಂಸ್ಕೃತಿ ಎಂಬುದು ಒಂದು ಮನೋಭಾವ; ಇದು ತನ್ನ ಪರಂಪರೆಯನ್ನು ಕುರಿತು ವ್ಯಕ್ತಿಯೊಬ್ಬನ </span></p>
<p style="margin: 0.0001pt; text-align: left;"><span style="color: #000000; font-family: Tunga;">ಪೂರ್ವಗ್ರಹಗಳಿಲ್ಲದ ಅರಿವು. ಪರಂಪರೆಯ ಎಳೆಗಳನ್ನು ತುಂಡರಿಸಿಕೊಂಡ ಅಡ್ಡಜಾತಿಯ ತ್ರಿಶಂಕು </span><span style="color: #000000; font-family: Tunga;">ಮಾನಸಿಕತೆ ಮತ್ತು ತಾಯಿ ಬೇರಿನಿಂದ ಪೂರ್ಣವಾಗಿ ವಂಚಿತವಾದ ಟೊಳ್ಳು ಜನಾಂಗವನ್ನು - ಎಂದರೆ </span><span style="color: #000000; font-family: Tunga;">ಪೂರ್ವಾಕ್ಕಾಗಲೀ, ಪಶ್ಚಮಕ್ಕಾಗಲೀ, ಭೂತಕ್ಕಾಗಲೀ, ಭವಿ?ಕ್ಕಾಗಲೀ ಸೇರದ ಸಮಾಜಬಾಹಿರ ಬೌದ್ಧಿಕವರ್ಗವನ್ನು </span><span style="color: #000000; font-family: Tunga;">- ಸೃಷ್ಟಿಸಲು ಆಂಗ್ಲಶಿಕ್ಷಣವನ್ನು ಪಡೆದ ಒಂದೇ ಒಂದು ಪೀಳಿಗೆಯ? ಸಾಕು&#8221;. </span></p>
<p style="margin: 0.0001pt; text-align: left;"><span style="color: #000000; font-family: Tunga;">ಮಂತ್ರಸದೃಶವಾದ ಮೇಲಿನ ಮಾತುಗಳು ಆನಂದ ಕೆಂಟಿ? ಕುಮಾರಸ್ವಾಮಿ ಅವರದ್ದು; ಇವರು </span><span style="color: #000000; font-family: Tunga;">ನಮ್ಮ ಕಾಲದ ಒಬ್ಬ ಋಷಿಯೆಂದೇ ಪರಿಗಣಿತರಾಗಿದ್ದಾರೆ. </span></p>
<p style="margin: 0.0001pt; text-align: left;"><span style="color: #000000; font-family: Tunga;">ಖನಿಜಶಾಸ್ತ್ರ, ತತ್ವಶಾಸ್ತ್ರ, ಶಿಲ್ಪ, ಚಿತ್ರ, ಸಂಗೀತ, ಕರಕುಶಲತೆ - ಹೀಗೆ ಹಲವು ಹತ್ತು ವಿ?ಯಗಳಲ್ಲಿ ಆರುನೂರಕ್ಕೂ ಹೆಚ್ಚು ಪ್ರೌಢಪ್ರಬಂಧಗಳನ್ನೂ, ಹತ್ತಾರು ಉದ್ಗ್ರಂಥಗಳನ್ನೂ ರಚಿಸಿ ಇಡಿಯ ಜಗತ್ತಿನ ಪ್ರತಿಭಾವಂತರ, ಚಿಂತಕರ, ಕಲಾ ಯೋಗಿಗಳ ಸಾಲಿನಲ್ಲಿ ಅಲಂಕೃತರಾಗಿ ರುವವರು ಆನಂದ ಕುಮಾರಸ್ವಾಮಿ.ಜಗತ್ತಿನ ಬೇರೆ ಬೇರೆ ಪ್ರಾಂತಗಳ ಇಪ್ಪತ್ತಕ್ಕೂ ಹೆಚ್ಚು ಭಾ?ಗಳು ಇವರಿಗೆ ವಶವಾಗಿದ್ದುವು. ಇವರ ಬರಹದ ಒಂದೊಂದು ವಾಕ್ಯವೂ ಮಹಾಗ್ರಂಥ ವೊಂದರ ಸತ್ತ್ವವನ್ನೇ ಅಡಗಿಸಿಕೊಂಡಿದೆ, ಅರಗಿಸಿಕೊಂಡಿದೆ ಎಂದು ವಿದ್ವಾಂಸರು ಪ್ರಶಂಸಿಸಿದ್ದಾರೆ. ಬದುಕಿನ ಎಡರು-ತೊಡರುಗಳಿಗೆ ಬಗ್ಗದೆ, ಕುಗ್ಗದೆ ತಾವು ನಂಬಿದ್ದ </span><span style="color: #000000; font-family: Tunga;">ಮಹಾತ್ತ್ವವೊಂದರ ಅನುಸಂಧಾನದಲ್ಲಿಯೇ ತಮ್ಮ ಬಾಳನ್ನು ಬೆಳಗಿಸಿದ ತಪಸ್ವಿ ಇವರು. ಭಾರತೀಯ ಕಲಾಮೌಲ್ಯಗಳನ್ನು ಎತ್ತಿಹಿಡಿದು ಜಗತ್ತಿಗೆ ಅವುಗಳನ್ನು ಪರಿಚಯಿಸಿದ ಸಾಂಸ್ಕೃತಿಕ ರಾಯಭಾರಿ; ವಿಶ್ವದ ಎಲ್ಲ ಮಹಾಮೌಲ್ಯಗಳೂ ಒಂದೇ ಸತ್ತ್ವದ </span><span style="color: #000000; font-family: Tunga;">ಅಭಿವ್ಯಕ್ತಿಯೆಂದು ಸಾರಿದ ದಾರ್ಶನಿಕ ಆನಂದ ಕುಮಾರಸ್ವಾಮಿ. </span></p>
<p style="margin: 0.0001pt; text-align: left;"><span style="color: #000000; font-family: Tunga;">ಆನಂದ ಕುಮಾರಸ್ವಾಮಿ ಹುಟ್ಟಿದ್ದು ೧೮೭೭ರ ಆಗಸ್ಟ್ ೨೨ರಂದು, ಕೊಲೊಂಬೋ ನಗರದಲ್ಲಿ (ಈಗಿನ ಶ್ರೀಲಂಕಾ). ತಂದೆ ಸರ್ ಮುತ್ತು ಕುಮಾರಸ್ವಾಮಿ;ತಾಯಿ ಎಲಿಜಬೆತ್ ಕ್ಲೇ ಬೀಬಿ. ಮುತ್ತು ಕುಮಾರಸ್ವಾಮಿಯವರ ಪೂರ್ವಜರು ತಮಿಳುನಾಡಿನ </span><span style="color: #000000; font-family: Tunga;">ಮೂಲದವರು; ಎಲಿಜಬೆತ್ ಕ್ಲೇ ಇಂಗ್ಲೆಂಡ್ ದೇಶದವರು. </span></p>
<p style="margin: 0.0001pt; text-align: left;"><span style="color: #000000; font-family: Tunga;">ಮುತ್ತು ಕುಮಾರಸ್ವಾಮಿ ವಿದ್ವಾಂಸರು; ಬ್ರಿಟಿ?ಆಡಳಿತದಲ್ಲಿ ಗಣ್ಯಸ್ಥಾನವನ್ನು ಪಡೆದಿದ್ದವರು. ಬ್ರಿಟಿ? ರಾಣಿ ಇವರಿಗೆ ನೈಟ್ ಹುಡ್ ಪದವಿಯನ್ನು ನೀಡಿ ಗೌರವಿಸಿದ್ದಳು. ಆನಂದ ಕುಮಾರಸ್ವಾಮಿ ಎರಡು ವ?ದ ಹಸುಳೆಯಾಗಿದ್ದಾಗಲೇ ಇವರು ತೀರಿಕೊಂಡರು. ಹೀಗಾಗಿ ಆನಂದ ಕುಮಾರಸ್ವಾಮಿ ತಾಯಿ ಯೊಂದಿಗೆ ಇಂಗ್ಲೆಂಡ್ ಸೇರಿದರು. </span></p>
<p style="margin: 0.0001pt; text-align: left;"><span style="color: #000000; font-family: Tunga;">ಆನಂದ ಕುಮಾರಸ್ವಾಮಿಯವರ ವಿದ್ಯಾಭ್ಯಾಸವೆಲ್ಲ ಇಂಗ್ಲೆಂಡಿನಲ್ಲೇ ನಡೆಯಿತು. ಭೂ ವಿಜ್ಞಾನ,ಸಸ್ಯಶಾಸ್ತ್ರಗಳೊಂದಿಗೆ ಬಿ.ಎಸ್‌ಸಿ ಪದವಿಯನ್ನು ಲಂಡನ್ನಿನ ಯೂನಿವರ್ಸಿಟಿ ಕಾಲೇಜ್‌ನಿಂದ ೧೯೦೦ ರಲ್ಲಿ ಪಡೆದರು. ಸಿಂಹಳದ್ವೀಪದ ಭೂಸಂಪತ್ತನ್ನು ಕುರಿತು ಹಲವಾರು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದ ಕುಮಾರಸ್ವಾಮಿಯವರ ಪ್ರತಿಭೆಯನ್ನು ಮೆಚ್ಚಿಕೊಂಡು ೧೯೦೩ ರಲ್ಲಿ ಬ್ರಿಟಿ? ಸರ್ಕಾರ ಮಿನರಲಾಜಿಕಲ್ ಸರ್ವೆ ಆಫ್ ಸಿಲೋನ್ನ ನಿರ್ದೇಶಕರನ್ನಾಗಿ ನೇಮಿಸಿತು. ತೋರಿಯನೈಟ್ ಎಂಬ ಹೊಸ ಖನಿಜವೊಂದನ್ನು ಇವರು ೧೯೦೪ ರಲ್ಲಿ ಕಂಡು ಹಿಡಿದರು. ಇವರು ಖನಿಜಶಾಸ್ತ್ರದ ಬಗ್ಗೆ P ಟಿ ಸಿz ಬ್ರ ಂzಗs ಳಿ U ಲಂqನ ವಿವಿದ್ಯಾಲಂi ೧೯೦೬ ರಲ್ಲಿ ಡಾಕ್ಟೊರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.</span></p>
<p style="margin: 0.0001pt; text-align: left;"><span style="color: #000000; font-family: Tunga;">ಪರಕೀಯ - ಸಂಸ್ಕೃತಿಗಳು ಸ್ಥಳೀಯ - ಸಂಸ್ಕೃತಿಗಳ ಮೇಲೆ ಎರಗಿ, ಆ ಮೂಲಸಂಸ್ಕೃತಿಗಳ ವಿವರಗಳನ್ನೆಲ್ಲ ಬುಡಮೇಲು ಮಾಡಿರುವುದನ್ನು ಕುಮಾರಸ್ವಾಮಿಯವರು ತಾವು ಸಿಂಹಳದಲ್ಲಿದ್ದಾಗ ನೇರವಾಗಿ ಕಂಡು ಕೊಂಡರು. ಜನಮಾನಸದಲ್ಲಿ ಮತ್ತೆ </span><span style="color: #000000; font-family: Tunga;">ತಮ್ಮ ಪರಂಪರೆ - ಸಂಪ್ರದಾಯ - ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸಿ, ಅಭಿಮಾನ ತಳೆಯುವಂತೆ ಮಾಡಬೇಕಾದುದರ ಅವಶ್ಯಕತೆಯನ್ನು ಮನಗಂಡರು. ಭಾರತೀಯ ದರ್ಶನ, ಕಲೆ, ಧರ್ಮ, ಸಂಸ್ಕೃತಿಗಳಿಗೆ ಸೇರಿದ ಗ್ರಂಥಗಳ ಅಧ್ಯಯನದಲ್ಲಿ ತಲ್ಲೀನರಾದರು. ಭಾರತದೇಶವನ್ನೆಲ್ಲ ಸುತ್ತಾಡಿ ಭಾರತೀಯ ಸಂಸ್ಕೃತಿಯ ನೇರವಾದ ಪರಿಚಯವನ್ನು ಮಾಡಿಕೊಂಡರು. ಈ </span><span style="color: #000000; font-family: Tunga;">ಓಡಾಟದಲ್ಲಿ ಬಾಲಗಂಗಾಧರ ತಿಲಕ್, ಗೋಪಾಲಕೃ?ಗೋಖಲೆ, ಅರವಿಂದ್ ಘೋ?, ವಿಪಿನ ಚಂದ್ರಪಾಲ್, ಸುರೇಂದ್ರನಾಥ ವಂದೋಪಾಧ್ಯಾಯ,ಅವನೀಂದ್ರನಾಥ ಠಾಕೂರ್, ನಂದಲಾಲ ಬಸು, </span><span style="color: #000000; font-family: Tunga;">ಅರ್ಧೇಂದುಕುಮಾರ ಗಂಗೂಲಿ ಮೊದಲಾದ ಖ್ಯಾತನಾಮರ ಸ್ನೇಹ ಒದಗಿತು. ಸಿಂಹಳ ದ್ವೀಪದ ಕರಕುಶಲಕಲೆಗಳ ಬಗ್ಗೆ ತಾವು ಸಂಗ್ರಹಿಸಿದ್ದ ಮಾಹತಿಯನ್ನೆಲ್ಲ ಕೊಡಿಸಿ ಒeಜiಚಿevಚಿಟ Siಟಿhಚಿಟese ಂಡಿಣ ಎಂಬ ಉದ್ಗ್ರಂಥವನ್ನು ಪ್ರಕಟಿಸಿದರು(೧೯೦೮ ರಲ್ಲಿ). ಇದೇ ವ? ಕುಮಾರಸ್ವಾಮಿಯವರು ಪ್ರಕಟಿಸಿದ ಖಿhe ಂim oಜಿ Iಟಿಜiಚಿ ಂಡಿಣ (ಭಾರತೀಯ ಕಲೆಯ ಗೊತ್ತುಗುರಿ) ಎಂಬ </span><span style="color: #000000; font-family: Tunga;">ಪ್ರಬಂಧವು ಭಾರತೀಯ ಕಲಾಪರಂಪರೆ ಯನ್ನು ಕುರಿತು ಜಗತ್ತಿನ ಕಲಾವಿದರ ಕಣ್ಣನ್ನು ವಿಶಾಲಗೊಳಿಸಿತು. </span></p>
<p style="margin: 0.0001pt; text-align: left;"><span style="color: #000000; font-family: Tunga;">ಆನಂದ ಕುಮಾರಸ್ವಾಮಿಯವರ ಆಸಕ್ತಿ ಈಗ ಪೂರ್ಣವಾಗಿ ಭೂ ವಿಜ್ಞಾನದಿಂದ ಕಲೆ, ಸಂಸ್ಕೃತಿಗಳ ಕಡೆಗೆ ತಿರುಗಿತು. ಇಂಗ್ಲೆಂಡಿನಲ್ಲೇ ಇದ್ದುಕೊಂಡು ಹಲವಾರು ಬಾರಿ ಭಾರತಕ್ಕೆ ಬಂದು ಸುತ್ತಾಡಿದರು. ಆಗ ಇಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮಕ್ಕೂ ಕುಮಾರಸ್ವಾಮಿಯವರು ಯೋಗದಾನ ನೀಡಿದರು. ಭಾರತವು ರಾಜಕೀಯವಾಗಿ ಮಾತ್ರವ? ಸ್ವಾತಂತ್ರ್ಯ </span><span style="color: #000000; font-family: Tunga;">ಪಡೆಯುವುದು ಮುಖ್ಯವಲ್ಲ; ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿಯೂ ಸ್ವತಂತ್ರವಾಗಬೇಕೆನ್ನುವುದು ಅವರ ಚಿಂತನೆ. ಜನರಲ್ಲಿ ಸ್ವದೇಶೀ ತತ್ತ್ವವು ರಕ್ತಗತವಾಗಬೇಕಾದರೆ ಈ ನೆಲದ ಧರ್ಮ, ಕಲೆ, ಆಚಾರ - ವಿಚಾರಗಳನ್ನು </span><span style="color: #000000; font-family: Tunga;">ಮೈಗೂಡಿಸಿಕೊಳ್ಳುವುದು ಅನಿವಾರ್ಯವೆಂದರು. ಸ್ವದೇಶೀ ಕಲ್ಪನೆಗೂ ಆಧ್ಯಾತ್ಮಿಕತೆಗೂ ಅವಿನಾಭಾವ ಸಂಬಂಧ ಇದೆಯೆಂಬುದು ಅವರ ತತ್ತ್ವ. </span></p>
<p style="margin: 0.0001pt; text-align: left;"><span style="color: #000000; font-family: Tunga;">ಕುಮಾರಸ್ವಾಮಿಯವರು ಭಾರತದ ಉದ್ದಗಲಕ್ಕೂ ಸಂಚರಿಸಿ ನೂರಾರು ಚಿತ್ರಗಳು, ಪ್ರತಿಮೆಗಳು, ಶಿಲ್ಪಗಳು, ಲೋಪಕರಣಗಳನ್ನು ಸಂಗ್ರಹಿಸಿದ್ದರು ಇವೆಲ್ಲವನ್ನೂ ಒಟ್ಟುಗೂಡಿಸಿ, ಭಾರತದ ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವಾದ ವಾರಣಾಸಿಯಲ್ಲಿ ರಾಷ್ಟ್ರೀಯ ಮ್ಯೂಸಿಯಂ ಒಂದನ್ನು ಸ್ಥಾಪಿಸಬೇಕೆನ್ನುವುದು ಅವರ ಬಯಕೆ ಯಾಗಿದ್ದಿತು; ಆದರೆ ಇದಕ್ಕೆ ಅವಕಾಶವಾಗಲಿಲ್ಲ. </span></p>
<p style="margin: 0.0001pt; text-align: left;"><span style="color: #000000; font-family: Tunga;">ಯಾವುದಾದರೊಂದು ಭಾರತೀಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದುಕೊಂಡು ಭಾರತದಲ್ಲೇ ಉಳಿಯಬೇಕೆಂದು ಹಂಬಲಿಸಿದರು. ಇದೂ ನೆರವೇರಲಿಲ್ಲ. ಕೊನೆಗೆ, ನಿರಾಶೆಯಿಂದ ಅವರು ಅಮೆರಿಕೆಯನ್ನು ಸೇರಿದರು. ಅಲ್ಲಿಯ ಬೋಸ್ಟನ್ </span><span style="color: #000000; font-family: Tunga;">ಮ್ಯೂಸಿಯಂನಲ್ಲಿ ಭಾರತೀಯ ಕಲೆಗಳ ರಕ್ಷಕರಾಗಿ ನೇಮಕವಾದರು. ಅಪೂರ್ವ ಕಲಾನಿಧಿಯೊಂದು ಹೀಗೆ ತವರೂರನ್ನು ಬಿಟ್ಟು ದೂರದ ಬೋಸ್ಟನ್ಮ್ಯೂಸಿಯಂನ್ನು ಸೇರಿತು. ಇಂಥದೊಂದು ಅಮೂಲ್ಯ ಕಲಾಸಂಗ್ರಹವನ್ನು ಉಳಿಸಿಕೊಳ್ಳದೇ ಹೋದುದು ನಮ್ಮ ಪಾಲಿಗೆ ದಿಟವಾಗಿಯೂ ದೊಡ್ಡ ನ?.</span></p>
<p style="margin: 0.0001pt; text-align: left;"><span style="color: #000000; font-family: Tunga;">ಕುಮಾರಸ್ವಾಮಿಯವರಿಗೆ ಇಂಗ್ಲಿ?, ಸಂಸ್ಕೃತ,ಪಾಳಿ, ಪ್ರಾಕೃತ, ಸಿಂಹಳೀ ಬಂಗಾಲೀಭಾ?ಗಳಲ್ಲದೆಯೇ ಅರ್‍ಯಾಬಿಕ್, ಅವೆಸ್ತನ್, ಪರ್ಶಿಯನ್, ಗ್ರೀಕ್,ಲ್ಯಾಟಿನ್, ಫ್ರೆಂಚ್, ಇಟ್ಯಾಲಿಯನ್, ಸ್ಪ್ಯಾನಿ?ವು ಂತಾz ತ g ಬಾs ?ಗೆ ಳ ಲಿ s vವಿ ದ್ದಿತು . ಆಂii </span><span style="color: #000000; font-family: Tunga;">ಭಾ?ಗಳ ಮೂಲ ಗ್ರಂಥಗಳನ್ನೆಲ್ಲ ಮೂಲದಲ್ಲೇ ಅಧ್ಯಯನ ಮಾಡಿದ್ದರು. ವೇದ, ಉಪನಿ?ತ್ತು, ಬೌದ್ಧಜೈ ದರ್ಶನಗಳಲ್ಲದೆ ಕ್ರೈಸ್ತಮತ, ಇಸ್ಲಾಂಮತ,ಸೂಫಿತತ್ತ್ವ, ಚೀನಿ - ಜಪಾನ್ ದರ್ಶನ ಮುಂತಾದ ಹಲವು ಮತಸಿದ್ಧಾಂತಗಳನ್ನೂ ಕರಗತಮಾಡಿ ಕೊಂಡಿದ್ದರು. ಅವರ ಬರವಣಿಗೆಯನ್ನು ಗಮನಿಸಿರುವವರಿಗೆ ಅವರ ಅಧ್ಯಯನದ ವಿಸ್ತಾರ, ತಿಳಿವಿನ ಔದಾರ್ಯ, ಸತ್ಯಾನ್ವೇ?ಣೆಯಲ್ಲಿ ನಿ?, ಪ್ರವೃತ್ತಿಯಲ್ಲಿ ಆಧ್ಯಾತ್ಮಿಕತೆ - ಇವು ಎದ್ದುಕಾಣುವ ವಿವರಗಳು. ಅವರು ತಮ್ಮ ಈ ವಿಶಾಲ ನೆಲೆಯಿಂದ ಹೇಳುತ್ತಿದ್ದುದು; ಜಗತ್ತಿಗೇ </span><span style="color: #000000; font-family: Tunga;">ಭಾರತ ಗುರು.</span></p>
<p style="margin: 0.0001pt; text-align: left;"><span style="color: #000000; font-family: Tunga;">ಬೂ ನ್ ಸ ಂ U ಲಂi ನ ರಿz ವು ಲೆ ಕುಮಾರಸ್ವಾಮಿಯವರು ತಮ್ಮ ಬದುಕನ್ನು ಜ್ಞಾನೋಪಾಸನೆಗೇ ಅರ್ಪಿಸಿಕೊಂಡರು. ಲೌಕಿಕಜೀವನದಲ್ಲಿ ಅವರಿಗೆ ಆಸಕ್ತಿ ಅ?ಗಿ ಉಳಿದುಕೊಳ್ಳಲಿಲ್ಲ. ಅವರು ಒಂದೆಡೆ ಹೀಗೆಂದಿದ್ದಾರೆ: ನಾನೊಬ್ಬ ಸಮಾಜ ಸುಧಾಕರನೂ </span><span style="color: #000000; font-family: Tunga;">ಅಲ್ಲ, ಪ್ರಚಾರಕನೂ ಅಲ್ಲ. ನನ್ನ ಬಗ್ಗೆ ನಾನೆಂದಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಯಾವುದೇ ನೂತನ ಸಿದ್ಧಾಂತವನ್ನಾಗಲೀ, ನನ್ನದೇ ತತ್ತ್ವವನ್ನಾಗಲೀ ಅಥವಾ ವ್ಯಾಖ್ಯಾನವನ್ನಾಗಲೀ ಮಂಡಿಸುತ್ತಿಲ್ಲ. ನಿರ್ವಿಕಾರಸತ್ಯ ವೆಂದು ನಾನು ತಿಳಿದುಕೊಂಡಿರುವುದನ್ನು ಅರ್ಥಮಾಡಿ ಕೊಳ್ಳಲು ಜೀವನದುದ್ದಕ್ಕೂ ಪ್ರಯತ್ನಿಸುವುದ? ನನ್ನ ಕೆಲಸ. ಇದರಲ್ಲೂ ಕೂಡ, ಮೊದನೆಯ ಆದ್ಯತೆಯೆಂದರೆ ನನ್ನ ಆತ್ಮೋನ್ನತಿಯೇ; ಅನಂತರದಲ್ಲಿ, ಈ ನನ್ನ ಫಲಿತಾಂಶಗಳನ್ನು ಬೇರೆಯವರೂ ಬಳಸಿಕೊಳ್ಳ ಬಹುದು.</span></p>
<p style="margin: 0.0001pt; text-align: left;"><span style="color: #000000; font-family: Tunga;">ನನ್ನ ದೃಷ್ಟಿಯಲ್ಲಿ, ಕೆಲವು ಸೂತ್ರಗಳು, ಸಿದ್ಧಾಂತಗಳು, ಮೌಲ್ಯಗಳು ಪ್ರಶ್ನಾತೀತವಾದಂಥವು. ನನ್ನ ಆಸಕ್ತಿಯಿರುವುದು ಹೊಸ ಹೊಸ ಸಿದ್ಧಾಂತಗಳನ್ನು ಕುರಿತು ಚಿಂತಿಸುವುದರಲ್ಲಿ ಅಲ್ಲ; ಈಗಾಗಲೇ ಸ್ಥಾಪಿತವಾಗಿರು</span><span style="color: #000000; font-family: Tunga;">ವಂಥವುಗಳ ನಿದಿಧ್ಯಾಸನದಲ್ಲಿ. </span></p>
<p style="margin: 0.0001pt; text-align: left;"><span style="color: #000000; font-family: Tunga;">ಕಲೆ ಮತ್ತು ನಮ್ಮ ನಿತ್ಯದ ವ್ಯವಹಾರಗಳ ನಡುವೆ ಒಂದು ಪವಿತ್ರ ಸಂಬಂಧವಿದೆ; ಕಲೆಗೂ ಆಧ್ಯಾತ್ಮಿಕತೆಗೂ ಹತ್ತಿರದ ನಂಟು; ನಮ್ಮ ನಿತ್ಯಜೀವನವನ್ನು ಹಸನುಗೊಳಿಸುವುದೇ ಕಲೆಯ ಗುರಿಯಾಗಬೇಕೆಂದು ಅರ ತ್ರಿ ಪಾದಿಸಿzರ . ರಾ?ನಿi ಣ ಕಾಂi zಲಿ </span></p>
<p style="margin: 0.0001pt; text-align: left;"><span style="color: #000000; font-family: Tunga;">ಕಲಾಪ್ರಜ್ಞೆಯು ಜಾಗೃತವಾಗಿರಬೇಕೆಂದೂ, ಭಾರತದ ಸಂದರ್ಭದಲ್ಲಿ ಆಧ್ಯಾತ್ಮಿಕತೆ ಮತ್ತು ಕಲಾಪರಿಪೂರ್ಣತೆ - ಇವೆರಡೂ </span><span style="color: #000000; font-family: Tunga;">ಒಂದೇ ತತ್ತ್ವ ಎಂದೂ ಅವರು ವಿವರಿಸಿದರು. ಭಾರತೀಯ ಕಲಾಪರಂಪರೆಯ ಉಗಮಸ್ಥಾನ ಗ್ರೀಸ್ - ರೋಮ್‌ಗಳಲ್ಲ; ಭಾರತೀಯ ಕಲೆಯ ಮೂಲ ಭಾರತವೇ - ಎಂಬುದನ್ನು ಅವರು ಸ್ಥಾಪಿಸಿದರು.</span></p>
<p style="margin: 0.0001pt; text-align: left;"><span style="color: #000000; font-family: Tunga;">ಆಧುನಿಕತೆಯ ಸುಂಟರಗಾಳಿಯಲ್ಲಿ ಸಿಲುಕಿ ಬಿದ್ದಿರುವ ಮನು? ಇಂದು ಸೂಕ್ಷ್ಮಸಂವೇದನ ಶೀಲತೆಯನ್ನೇ ಕಳೆದುಕೊಳ್ಳು ತ್ತಿದ್ದಾನೆಂದು ಅವರು ಪರಿತಪಿಸಿದರು. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಅಪೂರ್ವ ವಸ್ತುಗಳು ತಾಂತ್ರಿಕತೆಯಿಂದ ನಮ್ಮದಾಗಿರಬಹುದು. ಆದರೆ ಇದಕ್ಕೆ ನಾವು ತೆತ್ತಿರುವ ಬೆಲೆಯೂ ಅಪಾರ. ಕೈಗಾರಿಕಾ ಕ್ರಾಂತಿಯು ಬದುಕಿನ ಕಲಾಶ್ರೀಮಂತಿಕೆಯನ್ನೇ ಉಧ್ವಸ್ತಗೊಳಿಸಿ, ಸಂಸ್ಕೃತಿಯ ತಾಯಿಬೇರುಗಳನ್ನೇ ಕಿತ್ತೊಗೆದುಬಿಟ್ಟಿದೆ ಎಂದು ದುಃಖಿತರಾದರು. ಈ ಸಾಂಸ್ಕೃತಿಕ ಶೂನ್ಯತೆಯನ್ನು ಮನಗಂಡು, ಕಲಾಧರ್ಮದ ಪುನರುಜ್ಜೀವನಕ್ಕಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದರು. </span></p>
<p style="margin: 0.0001pt; text-align: left;"> </p>
<p style="margin: 0.0001pt; text-align: left;"><span style="color: #000000; font-family: Tunga;">ಕುಮಾರಸ್ವಾಮಿಯವರ ಕೆಲವು ಕೃತಿಗಳು ಇವು : ಹಿಸ್ಟರಿ ಆಫ್ ಇಂಡಿಯನ್ ಎಂಡ್ ಇಂಡೋನೇಶಿಯನ್ ಆರ್ಟ್, ಆರ್ಟ್ ಎಂಡ್ </span><span style="color: #000000; font-family: Tunga;">ಸ್ವದೇಶಿ ಇssಚಿಥಿs iಟಿ ಓಚಿಣioಟಿಚಿಟ Iಜeಚಿಟism, ಒeಜiಚಿevಚಿಟ Siಟಿhಚಿಟese ಂಡಿಣ, ಹಿಂದೂಯಿಸಂ ಎಂಡ್ ಬುದ್ಧಿಸಂ, ಟ್ರಾನ್ಸ್‌ಫರ್‌ಮೇಶನ್ ಆಫ್ ನೇಚರ್ ಇನ್ ಆರ್ಟ್, ಬುದ್ಧ ಎಂಡ್ ದ ಗಾಸ್ಪೆಲ್ ಆಫ್ ಬುದ್ಧಿಸಂ, ದ ಡ್ಯಾನ್ಸ್ ಆಫ್ ಶಿವ, ಫಿಗರ್‍ಸ್ ಆಫ್ ಸ್ಪೀಚ್ ಆರ್ ಫಿಗರ್‍ಸ್ ಆಫ್ ಥಾಟ್, ಒiಡಿಡಿoಡಿ oಜಿ ಉesಣuಡಿe (ದುಗ್ಗಿರಾಲ ಗೋಪಾಲಕೃ? ಅವರೊಂದಿಗೆ), ಒಥಿಣhs oಜಿ ಣhe ಊiಟಿಜus ಚಿಟಿಜ ಃuಜಜhisಣs (ಸೋದರಿ ನಿವೇದಿತಾ ಅವರೊಂದಿಗೆ) ಖಚಿರಿಠಿuಣ ಠಿಚಿiಟಿಣiಟಿg, ಂ ಓeತಿ ಠಿಠಿಡಿoಚಿಛಿh </span><span style="color: #000000; font-family: Tunga;">ಣo ಣhe ಗಿeಜಚಿs. </span></p>
<p style="margin: 0.0001pt; text-align: left;"><span style="color: #000000; font-family: Tunga;">ಕುಮಾರಸ್ವಾಮಿಯವರು ತಮ್ಮ ಬದುಕಿನ ಕೊನೆಯ ದಿನಗಳನ್ನು ತಮಗೆ ಸ್ಫೂರ್ತಿಕ್ಷೇತ್ರವಾಗಿದ್ದ ಭಾರತದಲ್ಲಿಯೇ ಕಳೆಯಬೇಕೆಂದು ಬಯಸಿದ್ದರು. ಆದರೆ ಅವರ ಕೊನೆಯ ಆಸೆ ಕೈಗೂಡಲಿಲ್ಲ. ೧೯೪೭ರ ಸೆಪ್ಟೆಂಬರ್ ೯ರಂದು ಅಮೆರಿಕೆಯಲ್ಲೆಯೇ ಕೊನೆಯುಸಿರೆಳೆದರು. ಅನಂತರ, ಮುಂದೆ ಅವರ ಮಡದಿ ದೋನಾ ೧೯೬೫ರಲ್ಲಿ ಭಾರತಕ್ಕೆ ಬಂದು ಕುಮಾರಸ್ವಾಮಿಯವರ </span><span style="color: #000000; font-family: Tunga;">ಚಿತಾಭಸ್ಮವನ್ನು ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಿದರು.ಆನಂದ ಕುಮಾರಸ್ವಾಮಿ ಒಬ್ಬ ವಿಶ್ವಮಾನವ. ನನ್ನ ಆಸೆ ಭಾರತದೇಶಕ್ಕ? </span><span style="color: #000000; font-family: Tunga;">ಸೇವೆ ಸಲ್ಲಿಸುವುದಲ್ಲ; ಇಡೀ ಮಾನವ ಸಮಾಜಕ್ಕೇ ನನ್ನ ಸೇವೆ ಸಲ್ಲಬೇಕು. ಅವಲೋಕಿತೇಶ್ವರನ ಆದರ್ಶವನ್ನು ಪಾಲಿಸಿ, ಸಾಧ್ಯವಾದ?ವಿಶ್ವಕುಟುಂಬಿಯಾಗಬೇಕೆಂಬುದು ನನ್ನ ಆಸೆ ಎನ್ನುವುದು ಅವರ ನಿತ್ಯ ಪಾರ್ಥನೆಯಾಗಿದ್ದಿತು. ಮಾನವನ ನೆಲೆ-ಬೆಲೆಗಳನ್ನೂ, ಬದುಕಿನ ಆಳ-</span><span style="color: #000000; font-family: Tunga;">ಅಗಲಗಳನ್ನೂ ಅರಿಯಬಯಸುವವರಿಗೆಲ್ಲ ಕುಮಾರಸ್ವಾಮಿಯವರ ಬರೆಹಗಳ </span><span style="color: #000000; font-family: Tunga;">ಅಧ್ಯಯನ ಒಂದು ಮಹಾಸಂಸ್ಕಾರ; ಹಾಗೆಯೇ, ಭಾರತೀಯ ಕಲೆ-</span><span style="color: #000000; font-family: Tunga;">ಸಂಸ್ಕೃತಿ-ದರ್ಶನಗಳ ಹೃದಯ ನಮಗೆ ಹತ್ತಿರವಾಗಲು ಇದು ಅನಿವಾರ್ಯ </span><span style="color: #000000; font-family: Tunga;">ಸಂಸ್ಕಾರವೂ ಹೌದು. </span></p>
<p style="margin: 0.0001pt; text-align: left;"><span style="color: #000000; font-family: Tunga;">- ಎಸ್. ಸೂರ್ಯಪ್ರಕಾಶ ಪಂಡಿತ್</span></p>
]]></content:encoded>
			<wfw:commentRss>http://www.chaitrarashmi.com/specialarticles/%e0%b2%95%e0%b2%b2%e0%b2%be%e0%b2%a4%e0%b2%a4%e0%b3%8d%e0%b2%b5-%e0%b2%ae%e0%b2%b9%e0%b2%b0%e0%b3%8d%e0%b2%b7%e0%b2%bf-%e0%b2%86%e0%b2%a8%e0%b2%82%e0%b2%a6-%e0%b2%95%e0%b3%81%e0%b2%ae%e0%b2%be/feed</wfw:commentRss>
		</item>
		<item>
		<title>ಆಶ್ಫಾಕ್ ಉಲ್ಲಾ ನೆನಪೇ ಇಲ್ಲ</title>
		<link>http://www.chaitrarashmi.com/antarangadinda/%e0%b2%86%e0%b2%b6%e0%b3%8d%e0%b2%ab%e0%b2%be%e0%b2%95%e0%b3%8d-%e0%b2%89%e0%b2%b2%e0%b3%8d%e0%b2%b2%e0%b2%be-%e0%b2%a8%e0%b3%86%e0%b2%a8%e0%b2%aa%e0%b3%87-%e0%b2%87%e0%b2%b2%e0%b3%8d%e0%b2%b2</link>
		<comments>http://www.chaitrarashmi.com/antarangadinda/%e0%b2%86%e0%b2%b6%e0%b3%8d%e0%b2%ab%e0%b2%be%e0%b2%95%e0%b3%8d-%e0%b2%89%e0%b2%b2%e0%b3%8d%e0%b2%b2%e0%b2%be-%e0%b2%a8%e0%b3%86%e0%b2%a8%e0%b2%aa%e0%b3%87-%e0%b2%87%e0%b2%b2%e0%b3%8d%e0%b2%b2#comments</comments>
		<pubDate>Sun, 19 Dec 2010 16:06:55 +0000</pubDate>
		<dc:creator>ಸಂಪಾದಕ</dc:creator>
		
		<category><![CDATA[ಅಂತರಂಗದಿಂದ]]></category>

		<category><![CDATA[Ashfaq ulla Khan]]></category>

		<category><![CDATA[ಬಲಿದಾನ]]></category>

		<category><![CDATA[ಆಶ್ಫಾಕ್ ಉಲ್ಲಾ]]></category>

		<guid isPermaLink="false">http://www.chaitrarashmi.com/?p=495</guid>
		<description><![CDATA[ದೇಶದ ಹೆಮ್ಮೆಯ ಪುತ್ರ ಅಶ್ಫಾಕ್ ಬಲಿದಾನದ ನೆನಪು 
&#8211;ರಾಚಂ
&#8220;ನಾವು ಯಾವ ಧರ್ಮಕ್ಕೆ ಸೇರಿದವರು ಎನ್ನುವುದಕ್ಕಿಂತ ಮುಖ್ಯವಾಗಿ ನಾವೆಲ್ಲ ಭಾರತೀಯರು. ಹಿಂದೂಸ್ತಾನದ ಸ್ವಾತಂತ್ರ್ಯಕ್ಕಾಗಿ ಅನೇಕ ಹಿಂದೂ ಸೋದರರು ನೇಣುಗಂಬವನ್ನೇರಿದ್ದಾರೆ. ಆದರೆ ಮುಸಲ್ಮಾನರಲ್ಲಿ ಆ ಅದೃಷ್ಟಶಾಲಿ ನಾನೇ ಆಗಿರುವುದಕ್ಕೆ ತುಂಬಾ ಸಂತಸವೆನಿಸುತ್ತಿದೆ. ಅರೆ, ಒಬ್ಬ ಮುಸಲ್ಮಾನನನ್ನೂ ದೇಶಕ್ಕಾಗಿ ನೇಣಿಗೇರಲು ಬಿಡಿ&#8221;- ಅಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದ ಆಶ್ಫಾಕ್. ಡಿ.19ರಂದು ರಾಷ್ಟ್ರ ರಕ್ಷಣೆಗಾಗಿ ಅಶ್ಫಾಕ್ ಉಲ್ಲಾಖಾನ್, ರಾಮ್ ಪ್ರಸಾದ್ ಬಿಸ್ಮಿಲ್, ರೋಷನ್ ಸಿಂಗ್ ಬಲಿದಾನಗೈದ ದಿನ. ಅವರ ಸ್ಮರಣೆಗಾಗಿ ಈ ಲೇಖನ’.
ಒಗ್ಗೂಡಿಸಿ ಆಳಲು [...]]]></description>
			<content:encoded><![CDATA[<h1 class="articleheading">ದೇಶದ ಹೆಮ್ಮೆಯ ಪುತ್ರ ಅಶ್ಫಾಕ್ ಬಲಿದಾನದ ನೆನಪು </h1>
<p class="articleheading">&#8211;ರಾಚಂ</p>
<p class="articleheading"><em>&#8220;ನಾವು ಯಾವ ಧರ್ಮಕ್ಕೆ ಸೇರಿದವರು ಎನ್ನುವುದಕ್ಕಿಂತ ಮುಖ್ಯವಾಗಿ ನಾವೆಲ್ಲ ಭಾರತೀಯರು. ಹಿಂದೂಸ್ತಾನದ ಸ್ವಾತಂತ್ರ್ಯಕ್ಕಾಗಿ ಅನೇಕ ಹಿಂದೂ ಸೋದರರು ನೇಣುಗಂಬವನ್ನೇರಿದ್ದಾರೆ. ಆದರೆ ಮುಸಲ್ಮಾನರಲ್ಲಿ ಆ ಅದೃಷ್ಟಶಾಲಿ ನಾನೇ ಆಗಿರುವುದಕ್ಕೆ ತುಂಬಾ ಸಂತಸವೆನಿಸುತ್ತಿದೆ. ಅರೆ, ಒಬ್ಬ ಮುಸಲ್ಮಾನನನ್ನೂ ದೇಶಕ್ಕಾಗಿ ನೇಣಿಗೇರಲು ಬಿಡಿ&#8221;- ಅಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದ ಆಶ್ಫಾಕ್. ಡಿ.19ರಂದು ರಾಷ್ಟ್ರ ರಕ್ಷಣೆಗಾಗಿ ಅಶ್ಫಾಕ್ ಉಲ್ಲಾಖಾನ್, ರಾಮ್ ಪ್ರಸಾದ್ ಬಿಸ್ಮಿಲ್, ರೋಷನ್ ಸಿಂಗ್ ಬಲಿದಾನಗೈದ ದಿನ. ಅವರ ಸ್ಮರಣೆಗಾಗಿ ಈ ಲೇಖನ</em>’.</p>
<p class="articleheading">ಒಗ್ಗೂಡಿಸಿ ಆಳಲು ಸಾಧ್ಯವಾಗದಿದ್ದರೆ ಒಡೆದು ರಾಜ್ಯವಾಳು’ ಇದು ಭಾರತಕ್ಕೆ ಬ್ರಿಟಿಷರು ನೀಡಿದ ವಿಷ ಬೀಜದ ನೀತಿ. ಈ ದೇಶದ ಹಿಂದೂ-ಮುಸ್ಲಿಂರಲ್ಲಿ ರಾಷ್ಟ್ರೀಯ ಪ್ರಜ್ಞೆ ಜಾಗೃತಗೊಂಡರೆ ತಾವು ಆಳುವುದು ಕಷ್ಟ ಎಂದರಿತ ಬ್ರಿಟೀಷರು ಅವರಲ್ಲಿ ಪ್ರತ್ಯೇಕತೆಯ ಭಾವವನ್ನು ಅಂಕುರಿಸಿ ಕೋಮುವಾದದ ವಿಷ ಬೀಜ ಬಿತ್ತಿದರು. ಅಂದು ಬಂಗಾಳ ವಿಭಜನೆಯ ದುಷ್ಟ ಪ್ರಯತ್ನದಿಂದ ಆರಂಭವಾದ ಈ ವಿಷ ಬೀಜದ ಮೊಳಕೆ ಇಂದು ಉಗ್ರರನ್ನೂ ಮುದ್ದಿಸುವವರೆಗೆ ಹೆಮ್ಮರವಾಗಿ ಬೆಳೆದು ನಿಂತಿದೆ. </p>
<p>ಧರ್ಮ ಧರ್ಮಗಳ ಹೆಸರಲ್ಲಿ ಕಲಹ ಹುಟ್ಟು ಹಾಕಿ, ಆ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಷ್ಟ್ರ ದ್ರೋಹಿ ಪ್ರಜ್ಞೆ ದೇಶದ ಹೃದಯವನ್ನೇ ಭಗ್ನಗೊಳಿಸುತ್ತಿದೆ. ರಾಷ್ಟ್ರದ ಅತ್ಯಂತ ಪ್ರಮುಖ ಸ್ಥಾನವಾದ ಸಂಸತ್‌ನ ದಾಳಿಯ ಒಂಭತ್ತು ವರ್ಷಗಳ ನಂತರವೂ, ಸರ್ವೋಚ್ಚ ನ್ಯಾಯಾಲಯವೇ ಆರೋಪಿಯನ್ನು ತಪ್ಪಿತಸ್ಥನೆಂದು ನಿರ್ಧರಿಸಿ ಎರಡೆರಡು ಬಾರಿ ನೇಣು ಶಿಕ್ಷೆಯನ್ನು ವಿಧಿಸಿದ್ದರೂ ಸಂಸತ್ ದಾಳಿಯ ಪ್ರಮುಖ ಸೂತ್ರಧಾರ ಅಫ್ಜಲ್ ಗುರು ವಿನಂತಹ ದೇಶದ್ರೋಹಿ ಉಗ್ರನನ್ನು ಕೇವಲ ಧರ್ಮ ಕಾರಣಕ್ಕಾಗಿ ರಕ್ಷಿಸುವ ಹೀನ ಮನಸ್ಥಿತಿಯೂ ಆ ಕೋಮುವಾದದ ವಿಷಫಲ. ಇನ್ನೂ ಉಗ್ರ ಕಸಬ್ ಭಾರತದ ಪಾಲಿನ ಬಿಳಿಯಾನೆಯಾಗಿಬಿಟ್ಟಿದ್ದಾನೆ.</p>
<p>ಅಂದು ಬ್ರಿಟಿಷರು ಮಾಡಿದ್ದು ಇದನ್ನೇ. ಆದರೆ ಅದಕ್ಕೆ ದೇಶಭಕ್ತ ತರುಣ ಆಶ್ಫಾಕ್ ಉಲ್ಲಾಖಾನ್ ನೀಡಿದ ಉತ್ತರ, ಆಶ್ಫಾಕನ ದೇಶಭಕ್ತಿ, ರಾಷ್ಟ್ರಪ್ರೇಮ, ತ್ಯಾಗ, ಧರ್ಮಕ್ಕಿಂತ ಮಿಗಿಲಾದ ರಾಷ್ಟ್ರ ಪ್ರಜ್ಞೆ ಕೇವಲ ಮುಸಲ್ಮಾನರಿಗ? ಅಲ್ಲ. ಸಮಸ್ತ ಭಾರತೀಯರಿಗೂ ಅನುಕರಣೀಯ.</p>
<p>ಆಶ್ಫಾಕ್ ಉಲ್ಲಾಖಾನ್ ಉತ್ತರಪ್ರದೇಶದ ಶಹಜನಾಪುರದ ಶ್ರೀಮಂತ, ಸುಶಿಕ್ಷಿತ ಕುಟುಂಬದ ತರುಣ. ಅವನ ಪರಿವಾರದ ಹಲವರು ಬ್ರಿಟಿಷ್ ಸರಕಾರದ ಉಚ್ಚ ಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೂ ದೇಶದೆಡೆಗೆ ಆಶ್ಫಾಕನಿಗಿದ್ದ ಆದಮ್ಯ ಭಕ್ತಿ, ಪ್ರೇಮ ಅವನನ್ನು ದೇಶಭಕ್ತ ಕ್ರಾಂತಿಕಾರಿ ರಾಮಪ್ರಸಾದ್ ಬಿಸ್ಮಿಲ್ಲನೆಡೆಗೆ ಕರೆದುತಂದಿತು. ಈ ದೇಶದ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ, ಸಾಮರಸ್ಯಕ್ಕೆ ಆದರ್ಶಪ್ರಾಯ ಮಾದರಿ ಇದ್ದರೆ ಅದು ರಾಮ್‌ಪ್ರಸಾದ್ ಮತ್ತು ಆಶ್ಫಾಕ್‌ರದ್ದೇ.</p>
<p><strong>ಹಿಂದೂ ಮುಸ್ಲೀಮರಿಗೆ ಆದರ್ಶಪ್ರಾಯರು:</strong> ತಮ್ಮ ತಮ್ಮ ಧರ್ಮಗಳಲ್ಲಿ ನಿಷ್ಠರಾಗಿಯೂ ದೇಶದ ಸಮಗ್ರತೆಯ ವಿಷಯ ಬಂದಾಗ ಹೇಗೆ ಒಗ್ಗೂಡಿ ಮುನ್ನಡೆಯಬೇಕು ಎಂಬ ಆದರ್ಶವನ್ನು ಕಟ್ಟಿಕೊಟ್ಟವರು ಅವರು. ರಾಮ್‌ಪ್ರಸಾದ್ ಕಡು ಆರ್ಯಸಮಾಜಿ, ಆಶ್ಫಾಕ್‌ನಾದರೋ ನಿಷ್ಠಾವಂತ ಮುಸ್ಲಿಮ್. ರಾಮ್‌ಪ್ರಸಾದ್ ಜೈಲಿನಲ್ಲೇ ಹೋಮ ಹವನಗಳನ್ನು ಮಾಡಿದರೆ ಆಶ್ಫಾಕ್ ಪ್ರತಿನಿತ್ಯ ಐದು ಬಾರಿ ಪ್ರಾರ್ಥನೆ ಮಾಡುತ್ತಿದ್ದ. ಆದರೂ ಅವರಿಬ್ಬರು ಪರಸ್ಪರ ಸೋದರರಂತಿದ್ದರು. ಮತ್ತೊಮ್ಮೆ ರಾಮ-ಭರತರನ್ನು ನೋಡಿದಂತಾಯಿತು ಎಂದೊಮ್ಮೆ ಜೈಲು ಅಧಿಕಾರಿ ಉದ್ಗರಿಸಿದ್ದ.</p>
<p>ಡಿಸೆಂಬರ್ 19, 1927 ಕಾಕೋರಿ ಮೊಕದ್ದಮೆಯಲ್ಲಿ ರಾಮ್‌ಪ್ರಸಾದ್ ಬಿಸ್ಮಿಲ್, ಆಶ್ಫಾಕ್ ಉಲ್ಲಖಾನ್ ರಿಗೆ ಬ್ರಿಟಿಷ್ ಸರಕಾರದಿಂದ ನೇಣುಶಿಕ್ಷೆ. ಇಬ್ಬರಲ್ಲೂ ಮಾತೃಭೂಮಿಗಾಗಿ ನೇಣಿಗೇರುವ ಆನಂದ. ಅದಕ್ಕೂ ಮುನ್ನ ಬ್ರಿಟಿಷ್ ಸರಕಾರ ಇವರಿಬ್ಬರನ್ನೂ ಪ್ರತ್ಯೇಕಿಸಿ ಆಶ್ಫಾಕ್‌ನಲ್ಲಿ ಕೋಮುವಾದದ ವಿಷ ಬೀಜ ಬಿತ್ತಿ ಎಲ್ಲ ಕ್ರಾಂತಿಕಾರಿಗಳನ್ನೂ ಸೆರೆ ಹಿಡಿಯುವ ಕುತಂತ್ರದ ಪ್ರಯತ್ನ ಮಾಡಿತ್ತು. ಅದಕ್ಕೆ ನಿಯೋಜಿಸಲ್ಪಟ್ಟವನು ’ಖಾನ್ ಬಹದೂರ್ ತಹಸುಕ್ ಹುಸೈನ್’ ಎಂಬ ಬ್ರಿಟಿಷ್ ಸರಕಾರದ ಪೋಲಿಸ್ ಸೂಪರಿಂಟೆಂಡೆಂಟ್.</p>
<p>1927ರ ಸೆಪ್ಟೆಂಬರ್ ತಿಂಗಳ ಒಂದು ದಿನ ಖಾನ್ ಬಹಾದೂರ್ ಸಾಹೇಬ ಆಶ್ಫಾಕ್ ಉಲ್ಲಾಖಾನ್‌ನನ್ನು ಭೇಟಿಯಾಗಿ &#8220;ನೋಡು ನೀನು ಮುಸಲ್ಮಾನ, ನಾನೂ ಮುಸಲ್ಮಾನ ನಿನ್ನನ್ನು ಬಂಧಿಸಿರುವುದಕ್ಕೆ ನನಗೆ ಬೇಸರವಿದೆ. ರಾಮಪ್ರಸಾದ್ ಒಬ್ಬ ಹಿಂದೂ, ನೀನಾದರೋ ಒಂದು ಸಂಪ್ರದಾಯಸ್ಥ ಇಸ್ಲಾಂ ಕುಟುಂಬದವನು. ಆ ಕಾಫಿರರು ನಿನ್ನ ಮತ ಮತ್ತು ಜಾತಿಗೆ ವಿರುದ್ಧವಾದವರು. ಆ ಕಾಫಿರರಿಗೆ ಏಕೆ ಸಹಾಯ ಮಾಡುವೆ? ನೀನು ರಾಮ್‌ಪ್ರಸಾದನ ವಿರುದ್ಧ ಸರಕಾರದ ಪರವಾಗಿ ಸಾಕ್ಷಿ ಹೇಳು. ನಿನ್ನನ್ನು ತಕ್ಷಣ ಬಿಟ್ಟು ಬಿಡುವುದೇ ಅಲ್ಲದೆ ಸರಕಾರದ ಉದ್ಯೋಗ ಕೊಡಿಸುತ್ತೇನೆ&#8221; ಎಂದು ಆ ಕ್ರಾಂತಿಕಾರಿ ದೇಶಭಕ್ತ ತರುಣನ ಮೆದುಳಿನಲ್ಲಿ ಕೋಮುವಾದದ ವಿಷಬೀಜ ಬಿತ್ತುವ ಪ್ರಯತ್ನ ಮಾಡುತ್ತಾನೆ.</p>
<p><strong>ಅಶ್ಫಾಕನ ಸಿಡಿಲ ನುಡಿಗಳು:</strong> ಆದರೆ ’ದೇಶಪ್ರೇಮವೇ ನಿಜವಾದ ಧರ್ಮ’ ಎಂದರಿತಿದ್ದ ಆಶ್ಫಾಕ್ ಯಾವ ಪ್ರಲೋಭನೆಗೂ ಬಗ್ಗದೆ ನುಡಿಯುತ್ತಾನೆ, &#8220;ಸಾಕು ನಿಲ್ಲಿಸಿ ನಿಮ್ಮ ಅಪವಿತ್ರ ಮಾತುಗಳನ್ನು. ರಾಮ್‌ಪ್ರಸಾದ್ ನನ್ನ ಸೋದರ, ಆತನೊಬ್ಬ ನಿಜವಾದ ಭಾರತೀಯ. ಹಿಂದೂಸ್ತಾನದ ಸ್ವಾತಂತ್ರ್ಯವೇ ನಮ್ಮ ಲಕ್ಷ್ಯ. ಆಕಸ್ಮಾತ್ ರಾಮ್‌ಪ್ರಸಾದ್ ಹಿಂದೂ ಭಾವನೆಗಳಿಂದ ಪ್ರೇರಿತನಾಗಿದ್ದರೂ ನಾನು ಅವನೊಂದಿಗಿರುತ್ತಿದ್ದೆ. ಒಂದೊಮ್ಮೆ ಹಿಂದೂ ರಾಜರು ಮತ್ತು ಬ್ರಿಟಿಷರ ನಡುವೆ ಒಬ್ಬರನ್ನು ಆಯ್ದುಕೊಳ್ಳಬೇಕಾಗಿ ಬಂದರೆ ನಾನು ಹಿಂದೂ ರಾಜರನ್ನೇ ಆಯ್ದುಕೊಳ್ಳುವೆ. ಏಕೆಂದರೆ ಅವರು ಹಿಂದೂಸ್ತಾನದವರೇ ಆಗಿದ್ದಾರೆ&#8221;. ಆಶ್ಫಾಕನ ಸ್ಪಷ್ಟ ನುಡಿಯಿದು.</p>
<p>1927ರ ಡಿಸೆಂಬರ್ 19ರಂದು ಗಲ್ಲಿಗೇರುವ ಮುನ್ನ ಆಶ್ಫಾಕ್ ಕಂಡಿದ್ದ ಕನಸು ನನ್ನೀ ಪ್ರಿಯ ಮಾತೃಭೂಮಿಯು ಮುಕ್ತಗೊಂಡು ಎಂದೆಂದಿಗೂ ವೈಭವದಿಂದ ಮೆರೆಯುವಂತಾಗಲಿ. ಆ ಕನಸು ನನಸಾಗಿದ್ದು ಅರ್ಧಭಾಗವಷ್ಟೇ. ಇಂದು ಆಶ್ಫಾಕ್ ಉಲ್ಲಾ ನೆನಪೇ ಇಲ್ಲ. ಈ ದೇಶದ ಮುಸ್ಲಿಂ ಸೋದರರಿಗೆ ಆಶ್ಫಾಕ್ ಉಲ್ಲಾ ಎಂದಿಗೂ ಆದರ್ಶವಾಗುವುದೇ ಇಲ್ಲ. ಹಿಂದೂ ಮುಸ್ಲಿಂರನ್ನು ಒಂದುಗೂಡಿಸಿ ನಾವೆಲ್ಲ ಭಾರತೀಯರು ಎಂದು ರಾಷ್ಟ್ರಪ್ರಜ್ಞೆ ಬೆಳಸುವ ನಾಯಕರಾರೂ ಕಾಣುತ್ತಿಲ್ಲ. ಹಾಗಾಗಿಯೇ ಬಹಿರಂಗವಾಗಿ ಲಾಡೆನ್‌ನನ್ನು ಸಮರ್ಥಿಸುವ ಶಹೀದ್ ಬುಖಾರಿ, ಪ್ರಾಧ್ಯಾಪಕನಾಗಿ ದೇಶದ್ರೋಹಕ್ಕೆ ಯುವಕರನ್ನು ಪ್ರೇರೇಪಿಸುವ ಉಗ್ರ ಪ್ರೊ. ಗಿಲಾನಿ, ದೇಶದ ಒಡಲಿಗೆ ಬೆಂಕಿ ಹಚ್ಚಿದ ದಾವೂದ್, ಆಫ್ಜಲ್ ಗುರುನಂತಹವರು ಇವರೆಲ್ಲರ ಮಾದರಿಯಾಗುತ್ತಿದ್ದಾರೆ.</p>
<p>ಎಲ್ಲೋ ಒಂದಷ್ಟು ರಾಷ್ಟ್ರ ಪ್ರೇಮಿ ಯುವಕರು ಸಿಕ್ಕರೂ ಅವರಲ್ಲಿ ಮತಾಂಧತೆಯ, ಕೋಮುವಾದದ ವಿಷ ಬಿತ್ತುವ ಕಾರ್ಯ ಅವ್ಯಾಹತವಾಗಿ ನಡೆದಿದೆ. ದೇಶ ದ್ರೋಹದ ಆರೋಪ ಸಾಬೀತಾದ ಐದು ವರ್ಷಗಳ ನಂತರವೂ ಆಫ್ಜಲ್ ಗುರುನಂತಹ ಉಗ್ರನನ್ನು ಮುದ್ದಿಸುತ್ತಿರುವ ಕೈಗಳೇ ಇಂದು ನಮ್ಮ ನಿಮ್ಮ ಅಕ್ಕಪಕ್ಕದ ಮನೆಯ ಮುಗ್ಧ ಸೋದರರನ್ನೂ ದಾರಿ ತಪ್ಪಿಸುತ್ತಿವೆ. ಈ ಗಂಭೀರತೆಯನ್ನು ಮನಗಂಡೇ ಆಶ್ಫಾಕ್ ಉಲ್ಲಾ ಆ ಉದ್ಗಾರ ತೆಗೆದಿರಬಹುದು. ’ಅರೆ, ಓರ್ವ ಮುಸಲ್ಮಾನನನ್ನೂ ದೇಶಕ್ಕಾಗಿ ನೇಣಿಗೇರಲು ಬಿಡಿ’.</p>
]]></content:encoded>
			<wfw:commentRss>http://www.chaitrarashmi.com/antarangadinda/%e0%b2%86%e0%b2%b6%e0%b3%8d%e0%b2%ab%e0%b2%be%e0%b2%95%e0%b3%8d-%e0%b2%89%e0%b2%b2%e0%b3%8d%e0%b2%b2%e0%b2%be-%e0%b2%a8%e0%b3%86%e0%b2%a8%e0%b2%aa%e0%b3%87-%e0%b2%87%e0%b2%b2%e0%b3%8d%e0%b2%b2/feed</wfw:commentRss>
		</item>
		<item>
		<title>&#8216;ಚೈತ್ರರಶ್ಮಿ ಪ್ರಕಾಶನ&#8217;ದ ವತಿಯಿಂದ ಹೊಸ ಕಥೆಗಾರರಿಗಾಗಿ ರಾಜ್ಯಮಟ್ಟದ ಸಣ್ಣ ಕಥಾ ಸ್ಪರ್ಧೆ</title>
		<link>http://www.chaitrarashmi.com/editorial/%e0%b2%9a%e0%b3%88%e0%b2%a4%e0%b3%8d%e0%b2%b0%e0%b2%b0%e0%b2%b6%e0%b3%8d%e0%b2%ae%e0%b2%bf-%e0%b2%aa%e0%b3%8d%e0%b2%b0%e0%b2%95%e0%b2%be%e0%b2%b6%e0%b2%a8%e0%b2%a6-%e0%b2%b5%e0%b2%a4%e0%b2%bf</link>
		<comments>http://www.chaitrarashmi.com/editorial/%e0%b2%9a%e0%b3%88%e0%b2%a4%e0%b3%8d%e0%b2%b0%e0%b2%b0%e0%b2%b6%e0%b3%8d%e0%b2%ae%e0%b2%bf-%e0%b2%aa%e0%b3%8d%e0%b2%b0%e0%b2%95%e0%b2%be%e0%b2%b6%e0%b2%a8%e0%b2%a6-%e0%b2%b5%e0%b2%a4%e0%b2%bf#comments</comments>
		<pubDate>Sat, 20 Nov 2010 11:12:52 +0000</pubDate>
		<dc:creator>ಸಂಪಾದಕ</dc:creator>
		
		<category><![CDATA[ಸಂಪಾದಕೀಯ]]></category>

		<category><![CDATA[ಚೈತ್ರರಶ್ಮಿ ಪ್ರಕಾಶನ]]></category>

		<category><![CDATA[ಸಣ್ಣ ಕಥಾಸ್ಪರ್ಧೆ]]></category>

		<category><![CDATA[Chaitrarashmi]]></category>

		<guid isPermaLink="false">http://www.chaitrarashmi.com/?p=485</guid>
		<description><![CDATA[ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯಾಗಿ ರೂಪುಗೊಂಡಿರುವ &#8216;ಚೈತ್ರರಶ್ಮಿ&#8217; ಮಾಸಪತ್ರಿಕೆಯು ತನ್ನ 6ನೇ ವರ್ಷಾಚರಣೆ ಅಂಗವಾಗಿ &#8216;ಚೈತ್ರರಶ್ಮಿ ಪ್ರಕಾಶನ&#8217;ದ ವತಿಯಿಂದ ಹೊಸ ಕಥೆಗಾರರಿಗಾಗಿ ರಾಜ್ಯಮಟ್ಟದ ಸಣ್ಣ ಕಥಾ ಸ್ಪರ್ಧೆ ಯನ್ನು ಆಯೋಜಿಸಿದೆ.
ಗ್ರಾಮೀಣ ಹಾಗೂ ಹೊಸ ಅವಕಾಶಗಳ ಹುಡುಕಾಟದಲ್ಲಿರುವ ಯುವ ಕಥೆಗಾರರನ್ನು ಪ್ರೋತ್ಸಾಹಿಸುವುದು ಈ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಉದ್ದೇಶ. ಆಯ್ಕೆಯಾದ ಉತ್ತಮ ಹತ್ತು ಕಥೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು. ಕಥೆಗಳು ಸ್ವತಂತ್ರವಾಗಿರಬೇಕು. ಬೇರೆಲ್ಲೂ ಪ್ರಕಟವಾಗಿರಕೂಡದು. ಆಸಕ್ತ ಕಥೆಗಾರರು 3000 ಪದಗಳ ಮಿತಿಯಲ್ಲಿ ಇರುವ ತಮ್ಮ ಕಥೆಯನ್ನು ಅಂಚೆ ಅಥವಾ ಈ ಮೈಲ್ [...]]]></description>
			<content:encoded><![CDATA[<p>ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯಾಗಿ ರೂಪುಗೊಂಡಿರುವ &#8216;ಚೈತ್ರರಶ್ಮಿ&#8217; ಮಾಸಪತ್ರಿಕೆಯು ತನ್ನ 6ನೇ ವರ್ಷಾಚರಣೆ ಅಂಗವಾಗಿ &#8216;ಚೈತ್ರರಶ್ಮಿ ಪ್ರಕಾಶನ&#8217;ದ ವತಿಯಿಂದ ಹೊಸ ಕಥೆಗಾರರಿಗಾಗಿ ರಾಜ್ಯಮಟ್ಟದ ಸಣ್ಣ ಕಥಾ ಸ್ಪರ್ಧೆ ಯನ್ನು ಆಯೋಜಿಸಿದೆ.</p>
<p>ಗ್ರಾಮೀಣ ಹಾಗೂ ಹೊಸ ಅವಕಾಶಗಳ ಹುಡುಕಾಟದಲ್ಲಿರುವ ಯುವ ಕಥೆಗಾರರನ್ನು ಪ್ರೋತ್ಸಾಹಿಸುವುದು ಈ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಉದ್ದೇಶ. ಆಯ್ಕೆಯಾದ ಉತ್ತಮ ಹತ್ತು ಕಥೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು. ಕಥೆಗಳು ಸ್ವತಂತ್ರವಾಗಿರಬೇಕು. ಬೇರೆಲ್ಲೂ ಪ್ರಕಟವಾಗಿರಕೂಡದು. ಆಸಕ್ತ ಕಥೆಗಾರರು 3000 ಪದಗಳ ಮಿತಿಯಲ್ಲಿ ಇರುವ ತಮ್ಮ ಕಥೆಯನ್ನು ಅಂಚೆ ಅಥವಾ ಈ ಮೈಲ್ ಮೂಲಕ ಡಿಸೆಂಬರ್ 30 ರ ಒಳಗೆ ತಲುಪುವಂತೆ ಕಳುಹಿಸಬೇಕು. ಡಿಸೆಂಬರ್ 30 ಕೊನೆಯ ದಿನ.</p>
<p>ಕಥೆಗಳನ್ನು ಕಳುಹಿಸಬೇಕಾದ ವಿಳಾಸ:<br />
ರಾಮಚಂದ್ರ ಹೆಗಡೆ.ಸಿ.ಎಸ್.<br />
ಸಂಪಾದಕರು, ಚೈತ್ರರಶ್ಮಿ ಮಾಸಪತ್ರಿಕೆ<br />
`ನೆನಪು&#8217; ನಂ. 33(172/3)<br />
3ನೇ ಸಿ ಅಡ್ಡರಸ್ತೆ, ಕತ್ರಿಗುಪ್ಪ ಮುಖ್ಯರಸ್ತೆ.<br />
ವಿವೇಕಾನಂದನಗರ, ಬೆಂಗಳೂರು 560085<br />
editor@chaitrarashmi.com ಕಳುಹಿಸಬಹುದು.</p>
]]></content:encoded>
			<wfw:commentRss>http://www.chaitrarashmi.com/editorial/%e0%b2%9a%e0%b3%88%e0%b2%a4%e0%b3%8d%e0%b2%b0%e0%b2%b0%e0%b2%b6%e0%b3%8d%e0%b2%ae%e0%b2%bf-%e0%b2%aa%e0%b3%8d%e0%b2%b0%e0%b2%95%e0%b2%be%e0%b2%b6%e0%b2%a8%e0%b2%a6-%e0%b2%b5%e0%b2%a4%e0%b2%bf/feed</wfw:commentRss>
		</item>
		<item>
		<title>ನಮ್ಮದಾಗಲಿ ಸಾರ್ಥಕತೆಯ ಬದುಕು</title>
		<link>http://www.chaitrarashmi.com/lekhanagalu/%e0%b2%b9%e0%b2%b3%e0%b3%8d%e0%b2%b3%e0%b2%bf%e0%b2%ae%e0%b2%a8%e0%b3%86-%e0%b2%ae%e0%b2%be%e0%b2%a4%e0%b3%81/sarthakathe</link>
		<comments>http://www.chaitrarashmi.com/lekhanagalu/%e0%b2%b9%e0%b2%b3%e0%b3%8d%e0%b2%b3%e0%b2%bf%e0%b2%ae%e0%b2%a8%e0%b3%86-%e0%b2%ae%e0%b2%be%e0%b2%a4%e0%b3%81/sarthakathe#comments</comments>
		<pubDate>Thu, 04 Dec 2008 10:16:21 +0000</pubDate>
		<dc:creator>ರಾಚಂ</dc:creator>
		
		<category><![CDATA[ಹಳ್ಳಿಮನೆ ಮಾತು]]></category>

		<guid isPermaLink="false">http://www.chaitrarashmi.com/?p=448</guid>
		<description><![CDATA[’ಏ ಸುಬ್ಬಯ್ಯನ  ಮನೆ ಮಾಣಿ ಬೆಟ್ಟದ  ಮ್ಯಾಲೆ ಹೋಗಿ  ಸಿಗರೇಟು ಸೇದ್ತಾ  ಇದ್ದಿದ್ದನಂತೆ  ! ಅದನ್ನ ವೆಂಕಟೇಶ  ನೋಡಿದ್ದನಂತೆ  !’ &#8220;Breaking News&#8221; 

ಸಂಜೆ ಆಗುವುದರೋಳಗಾಗಿ ಅಂತಹ ದೊಂದು ಸುದ್ದಿ ಸುತ್ತಮುತ್ತಲಿನ ಹತ್ತೂರುಗಳಲ್ಲಿ ಬಿತ್ತರಗೊಂಡಿತ್ತು. ಬಿತ್ತರಿಸಿದ್ದು ಆಜ್‌ತಕ್ಕೊ, ಓ.ಆ.ಖಿ.ಗಿ ನೋ ಅಲ್ಲಾ. ಬಾಯಿಂದ ಬಾಯಿಗೆ ಹರಡಿದ ಸುದ್ದಿ ಅದು ! ೧೫ ದಿನ ಊರು ಕೇರಿ ಗಳಲ್ಲೆಲ್ಲಾ ಅದೇ ಸಮಾಚಾರ ! ಊರುಮನೆ ಯಾವುದೇ ಕಾರ್ಯಕ್ರಮವಾದರೂ ಹಳ್ಳಿ [...]]]></description>
			<content:encoded><![CDATA[<p style="margin: 0.0001pt; text-align: left;"><span style="font-family: Tunga; color: #000000;">’ಏ ಸುಬ್ಬಯ್ಯನ  ಮನೆ ಮಾಣಿ ಬೆಟ್ಟದ  ಮ್ಯಾಲೆ ಹೋಗಿ  ಸಿಗರೇಟು ಸೇದ್ತಾ  ಇದ್ದಿದ್ದನಂತೆ  ! ಅದನ್ನ ವೆಂಕಟೇಶ  ನೋಡಿದ್ದನಂತೆ  !’ &#8220;Breaking News&#8221; </span></p>
<p style="margin: 0.0001pt; text-align: left;">
<p style="margin: 0.0001pt; text-align: left;"><span style="font-family: Tunga; color: #000000;">ಸಂಜೆ ಆಗುವುದರೋಳಗಾಗಿ ಅಂತಹ ದೊಂದು ಸುದ್ದಿ ಸುತ್ತಮುತ್ತಲಿನ ಹತ್ತೂರುಗಳಲ್ಲಿ ಬಿತ್ತರಗೊಂಡಿತ್ತು. ಬಿತ್ತರಿಸಿದ್ದು ಆಜ್‌ತಕ್ಕೊ, ಓ.ಆ.ಖಿ.ಗಿ ನೋ ಅಲ್ಲಾ. ಬಾಯಿಂದ ಬಾಯಿಗೆ ಹರಡಿದ ಸುದ್ದಿ ಅದು ! ೧೫ ದಿನ ಊರು ಕೇರಿ ಗಳಲ್ಲೆಲ್ಲಾ ಅದೇ ಸಮಾಚಾರ ! ಊರುಮನೆ ಯಾವುದೇ ಕಾರ್ಯಕ್ರಮವಾದರೂ ಹಳ್ಳಿ ಹೆಂಗಸರಿಗೆ ಸುಬ್ಬಯ್ಯನ ಮನೆ ಎಲ್ಲರ ಚರಿತ್ರೆಯ ಪುಟಗಳನ್ನು ತಿರುವುವುದೇ ಕಾರ್ಯ ! ಇಂತಹ ದೊಂದು ಘಟನೆ ನಡೆದದ್ದು ೫ ವರ್ಷದ ಹಿಂದೆ ನಮ್ಮ ಊರಿನಲ್ಲಿ. ಹಾಗಂತ ಹಳ್ಳಿಗಳಿಗೆ ಇಂತಹ ಸುದ್ದಿ ಸಮಾಚಾರಗಳು ಹೊಸತೇನು ಅಲ್ಲ. ದಿನ ಬೆಳಗಾದ್ರೆ ಹಳ್ಳಿಗರು ಚಿಟ್ಟೆ ಮೇಲೆ ಕುಳಿತು ಪಟ್ಟಾಂಗ ಹೊಡೆಯುವುದು ಇಂತಹ ಸಮಾಚಾರಗಳನ್ನೇ ! ಅದೆಲ್ಲಾ ಸರಿ, ಸುಬ್ಬಯ್ಯನ ಮನೆ ಕಥೆ ಹೇಳಿದ್ದರಿಂದ ನಿಮಗೇನು ಬಂತು? ಅಂತ ನಾನು ಹಲವರಲ್ಲಿ ಪ್ರಶ್ನಿಸಿದ್ದೆ. ಹಳ್ಳಿ ಹೆಂಗಸರೆಲ್ಲಾ ಆಚೀಚೆ ಮನೆ ಸುದ್ದಿ ಹೇಳಿಯೇ ಕಾಲಕಳೆಯಬೇಕು ಎಂಬುದು ಹಳ್ಳಗಳಲ್ಲಿನ ಅಲಿಖಿತ ನಿಯಮವಾ? ಅಂತಾ ನನ್ನಲ್ಲೆ ಗೊಣಗಿದ್ದೆ. ಆದ್ರೆ ನನ್ನ ಪ್ರಶ್ನೆಗೆ ಉತ್ತರವೇನೂ ಸಿಕ್ಕಿರಲಿಲ್ಲ. ಅಂದಹಾಗೆ ಇವತ್ತು ನಮ್ಮ ಹಳ್ಳಿಗಳು ಸ್ವಲ್ಪ ಸುಧಾರಿಸಿವೆ. ಆಚೀಚೆ ಮನೆ ಸುದ್ದಿ ಬಿಟ್ಟು ಟಿ.ವಿ. ಧಾರಾವಾಹಿ ಕಥೆಗಳ ವಿಮರ್ಶೆಗಳತ್ತ ತೊಡಗಿದೆ. ಅಡಿಕೆ ಸುಲಿಯುವಾಗ, ಹೋಳಿಗೆ ಬೇಯಿಸು ವಾಗಲೆಲ್ಲಾ ಧಾರವಾಹಿಯ ವಿಚಾರಧಾರೆಗಳೇ! ನಮ್ಮ ಹಳ್ಳಿಗರು ಕಾದಂಬರಿ, ವಿಮರ್ಶೆ ಅಂತಾ ಬರೆಯಲಿಕ್ಕೆ ಆರಂಭಿಸಿದ್ದರೆ ಕನ್ನಡದ ಕಾದಂಬರಿ ಕಾರರೆಲ್ಲಾ ಬದಿಗೆ ನಿಲ್ಲಬೇಕಿತ್ತು ಅಂತಹದೊಂದು ಕ್ರಿಯಾಶೀಲತೆ ನಮ್ಮ ಹಳ್ಳಿ ಗರಲ್ಲಿದೆ ಅಂತಾ ನನ್ನಲ್ಲಿ ನಾನೇ ಎಷ್ಟೋ ಬಾರಿ ಅಂದುಕೊಂಡಿದ್ದೆ. ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತು ಅಂದ್ರೆ ನಮಗೆ ಓದಲು ಎಷ್ಟೋ ಪುಸ್ತಕಗಳಿವೆ. ತಿಳಿದು ಕೊಳ್ಳಲು ಎಷ್ಟೋ ವಿಚಾರಗಳಿವೆ. ಅದನ್ನೆಲ್ಲಾ ಬದಿಗೊತ್ತಿ ಹಳ್ಳಿಗರು ಅನಾವಶ್ಯಕವಾಗಿ ಸಮಯ ವ್ಯಯಮಾಡುತ್ತಿರುವುದರ ಬಗ್ಗೆ ನನ್ನ ಚಿಂತನೆ ಅಷ್ಟೇ. ಸೂಜಿ ಬಿದ್ದರೂ ದೊಡ್ಡ ಸುದ್ದಿ ಮಾಡೋ ಹಳ್ಳಿಗರ ನಾಗರೀಕತೆಯತ್ತ ನನ್ನ ಚಿತ್ತ ಹಾದು ಹೋಗಿದೆ. ಅಂತಹದೊಂದು ಕ್ರಿಯಾಶೀಲತೆ ’ವಿಚಾರವಂತರಾಗಿ ಪಟ್ಟಣ ಸೇರಿಸುವ ಹಳ್ಳಗರಲ್ಲಿ ಅದೇ ಪ್ರೀತಿ ವಿಶ್ವಾಸ, ಭಾವನಾತ್ಮಕ ಸಂಬಂಧ ಇದೆಯಾ ಮಗಾ? ಹಾಗಾಗಿ ನಮ್ಮ ಹಳ್ಳಿಗಳು ಹೀಗೆ ಇದ್ದರೆ ಚೆಂದಾ, ಅವಕ್ಕೆ ವಿಚಾರ ಏನೂ ಬೇಡ’ ಅಂತ ಯಾರೋ ಹಿರಿಯರು ಬೇಸರದಿಂದ ಹೇಳಿದ್ದರು. ಅವರು ಹೇಳಿದಂತೆ ಹಳ್ಳಿಗರು ಪಟ್ಟಣಸೇರಿ ಹಳ್ಳಿಗಳಲ್ಲಿನ ಆತ್ಮೀಯತೆ ಕಳೆದುಕೊಂಡು ಕಮರ್ಷಿಯಲ್ಲಾಗಿ ಬದುಕುತ್ತಿರುವುದೇನೋ ನಿಜ. ಆದರೆ ಪ್ರೀತಿ, ಸಂಸ್ಕೃತಿ ಉಳಿಸಿಕೊಂಡು ಹಳ್ಳಿಗರು ಕ್ರಿಯಾಶೀಲರಾಗಿ ಬದುಕಬಹುದು ಅಲ್ವಾ? ಪುಸ್ತಕ ಓದಿದಾಕ್ಷಣ ಭಾವನಾತ್ಮಕತೆಯನ್ನು ಕಳೆದುಕೊಳ್ಳಬೇಕು ಅಂತಾ ಇಲ್ಲ ಅಲ್ವಾ? ಖಂಡಿತವಾಗಿಯೂ ಹೌದು ಹಳ್ಳಿಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸಾಹಿತ್ಯದ ಕೃಷಿ ಮಾಡ್ತಾ ಇರೋ ಕೆಲ ಹಳ್ಳಿಗರು ಇದ್ದಾರೆ. ಅವರಂತೆ ನಾವು ಕೂಡಾ ಆಚೀಚೆ ಮನೆ ಸುದ್ದಿ ಬಿಟ್ಟು ಟಿ.ವಿ. ಬದಿಗೊತ್ತಿ, ಸಾಹಿತ್ಯದಲ್ಲೋ, ಪೂಜೆ ಪುನಸ್ಕಾರಗಳಲ್ಲೋ, ವಿಚಾರ ಸಂಗ್ರಹದಲ್ಲೋ ತಲ್ಲೀನರಾಗೋಣ ನಮ್ಮ ಮಕ್ಕಳಿಗೂ ಸಂಸ್ಕಾರಗಳನ್ನು ಹೇಳಿಕೊಡೋಣ. ಅಮ್ಮ ರಾತ್ರಿ ಭಜನೆ ಮಾಡಿದರೆ ಮಗೂನೂ ಭಜನೆ ಮಾಡತ್ತೆ, ಅಪ್ಪ ಪೇಪರ್ ಓದಿದರೆ ಮಗೂನೂ ಆ ಅಪ್ಪನನ್ನು ೧೦ ದಿನ ನೋಡಿ ಹನ್ನೊಂದನೆ ದಿನ ತಾನು ಏನಾದ್ರೂ ಓದಲು ಶುರುವಿಡತ್ತೆ. ಹಾಗೇನೆ ಅಪ್ಪ, ಅಮ್ಮ ಟಿ.ವಿಯಲ್ಲಿ ಗುಪ್ತಗಾಮಿನಿ ನೋಡ್ತಾ ಇದ್ದರೆ ಓದುತ್ತಿರೋ ಮಗುವೂ ಬಂದು ಅವರ ಜೊತೆ ಕೂರುತ್ತೆ. ಇದು ಸೈಕಾಲಜಿಕಲ್ ಫ್ಯಾಕ್ಟ್. ಇದೆಲ್ಲ ನಮ್ಮ ಹಳ್ಳಗರಿಗೆ ಅರ್ಥ ಆಗ್ತಿಲ್ಲ. ನಮ್ಮ ಇಂದಿನ ಯುವಕರು ಸರಿಯಿಲ್ಲ ಅಂತಾ ಮಾತ್ರ ದೂರುತ್ತಾರೆ. ಆದ್ರೆ ನಿಮ್ಮ ಮನೆ ಮಕ್ಕಳಿಗೆ ಇಂತಹದೊಂದು ಸಂಸ್ಕಾರ ಬೆಳೆಸಿ ಆಮೇಲೆ ಇನ್ನೊಬ್ಬರನ್ನು ದೂರಿ. ಪ್ರತಿಯೊಬ್ಬರಿಗೂ ಬೆಳೆಯುವ ವಾತಾವರಣದ ಅಂಶಗಳು ಬಂದೇ ಬರುತ್ತೆ. ಅಂತಹದೊಂದು ಸ್ವಸ್ಥ ವಾತಾವರಣ ಕಲ್ಪಸಿಕೊಡಿ. </span></p>
<p style="margin: 0.0001pt; text-align: left;"><span style="font-family: Tunga; color: #000000;"> </span></p>
<p style="margin: 0.0001pt; text-align: left;"><span style="font-family: Tunga; color: #000000;">ಹಾಗಾಗಿಯೇ ಹೇಳಿದ್ದು ಸುಮ್ನೆ ಆಚೀಚೆ ಮನೆ ಸುದ್ದಿಯನ್ನು ದಿನ ಬೆಳಗಾದ್ರೆ ನಮ್ಮ ಮನೆ ಚಿಟ್ಟೆ ಮೇಲೆ ಪಂಚಾಯ್ತಿಕೆ ಮಾಡೋದಕ್ಕಿಂತ ಆ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸೋಣ ಅಂತ. ಆ ಮನೆ ಮಾಣಿ ಸಿಗರೇಟು ಸೇದಿದ್ದರ ಬಗ್ಗೆ ಚಿಂತಿಸದೇ ನಮ್ಮನೆ ಮಾಣಿ ಸಿಗರೇಟು ಸೇದದಿರಲು ನಾವೇನು ಮಾಡ್ಬೇಕು ಅನ್ನೋದರ ಬಗ್ಗೆ ಚಿಂತಿಸೋಣ. ಸಾರ್ಥಕತೆಯ ಬದುಕನ್ನು ನಮ್ಮದಾಗಿಸಿಕೊಳ್ಳೋಣ. ಏನಂತೀರಾ?</span></p>
]]></content:encoded>
			<wfw:commentRss>http://www.chaitrarashmi.com/lekhanagalu/%e0%b2%b9%e0%b2%b3%e0%b3%8d%e0%b2%b3%e0%b2%bf%e0%b2%ae%e0%b2%a8%e0%b3%86-%e0%b2%ae%e0%b2%be%e0%b2%a4%e0%b3%81/sarthakathe/feed</wfw:commentRss>
		</item>
		<item>
		<title>ಸದ್ದಿಲ್ಲದೆ &#8220;ಭಾರತ&#8221; ಕಟ್ಟುತ್ತಿರುವ ಅಂತಹ ಮಹನೀಯರಿಗೆ ನಮನ</title>
		<link>http://www.chaitrarashmi.com/editorial/%e0%b2%b8%e0%b2%a6%e0%b3%8d%e0%b2%a6%e0%b2%bf%e0%b2%b2%e0%b3%8d%e0%b2%b2%e0%b2%a6%e0%b3%86-%e0%b2%ad%e0%b2%be%e0%b2%b0%e0%b2%a4-%e0%b2%95%e0%b2%9f%e0%b3%8d%e0%b2%9f%e0%b3%81%e0%b2%a4%e0%b3%8d</link>
		<comments>http://www.chaitrarashmi.com/editorial/%e0%b2%b8%e0%b2%a6%e0%b3%8d%e0%b2%a6%e0%b2%bf%e0%b2%b2%e0%b3%8d%e0%b2%b2%e0%b2%a6%e0%b3%86-%e0%b2%ad%e0%b2%be%e0%b2%b0%e0%b2%a4-%e0%b2%95%e0%b2%9f%e0%b3%8d%e0%b2%9f%e0%b3%81%e0%b2%a4%e0%b3%8d#comments</comments>
		<pubDate>Sat, 29 Nov 2008 13:04:36 +0000</pubDate>
		<dc:creator>ಸಂಪಾದಕ</dc:creator>
		
		<category><![CDATA[ಅಂತರಂಗದಿಂದ]]></category>

		<category><![CDATA[ಸಂಪಾದಕೀಯ]]></category>

		<category><![CDATA[ಡಾ|| ಹರೀಶ್ ಹಂದೆ]]></category>

		<category><![CDATA[Dr.Hareesh Hande]]></category>

		<category><![CDATA[harish hande]]></category>

		<guid isPermaLink="false">http://www.chaitrarashmi.com/?p=420</guid>
		<description><![CDATA[ಡಾ&#124;&#124; ಹರೀಶ್ ಹಂದೆ.
ಈ ಹೆಸರು ನಮ್ಮಲ್ಲಿ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಸದ್ದಿಲ್ಲದೆ, ಯಾವ ಸುದ್ದಿಯ ಹಂಗಿಗೂ ಬೀಳದೆ ನಿಶ್ಯಬ್ದವಾಗಿ ’ಭಾರತ’ ಕಟ್ಟುತ್ತಿರುವ ಲಕ್ಷಾಂತರ ಮಹನೀಯರಲ್ಲಿ ಡಾ&#124;&#124; ಹರೀಶ್ ಹಂದೆ ಕೂಡಾ ಒಬ್ಬರು.
ಐ‌ಐಟಿ ಕರಗ್‌ಪುರದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಹರೀಶ್ ಹಂದೆ ನಂತರ ಮೆಸಾಚುಸೆಟ್ಸ್ ವಿ.ವಿಯಲ್ಲಿ ಪಿ.ಎಚ್.ಡಿ ಅಧ್ಯಯನ ಆರಂಭಿಸಿದರು. ಈ ನಡುವೆ ಪ್ರವಾಸಕ್ಕೆ ತೆರಳಿದಾಗ ಭಾರತಕ್ಕಿಂತಲೂ ಹೆಚ್ಚು ಬಡಜನರನ್ನು ಹೊಂದಿರುವ ಡೊಮಿನಿಯನ್ ರಿಪಬ್ಲಿಕ್‌ನಲ್ಲಿ ಸೌರಶಕ್ತಿಯ ಬಳಕೆ, ಪ್ರಯೋಜನಗಳನ್ನು ಕಂಡು ಅಚ್ಚರಿಗೊಂಡ ಅವರು ಮುಂದೆ ಸೌರಶಕ್ತಿಯ ಕುರಿತು ವಿಶೇಷ ಅಧ್ಯಯನ [...]]]></description>
			<content:encoded><![CDATA[<p>ಡಾ|| ಹರೀಶ್ ಹಂದೆ.</p>
<p>ಈ ಹೆಸರು ನಮ್ಮಲ್ಲಿ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಸದ್ದಿಲ್ಲದೆ, ಯಾವ ಸುದ್ದಿಯ ಹಂಗಿಗೂ ಬೀಳದೆ ನಿಶ್ಯಬ್ದವಾಗಿ ’ಭಾರತ’ ಕಟ್ಟುತ್ತಿರುವ ಲಕ್ಷಾಂತರ ಮಹನೀಯರಲ್ಲಿ ಡಾ|| ಹರೀಶ್ ಹಂದೆ ಕೂಡಾ ಒಬ್ಬರು.</p>
<p><span id="more-420"></span>ಐ‌ಐಟಿ ಕರಗ್‌ಪುರದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಹರೀಶ್ ಹಂದೆ ನಂತರ ಮೆಸಾಚುಸೆಟ್ಸ್ ವಿ.ವಿಯಲ್ಲಿ ಪಿ.ಎಚ್.ಡಿ ಅಧ್ಯಯನ ಆರಂಭಿಸಿದರು. ಈ ನಡುವೆ ಪ್ರವಾಸಕ್ಕೆ ತೆರಳಿದಾಗ ಭಾರತಕ್ಕಿಂತಲೂ ಹೆಚ್ಚು ಬಡಜನರನ್ನು ಹೊಂದಿರುವ ಡೊಮಿನಿಯನ್ ರಿಪಬ್ಲಿಕ್‌ನಲ್ಲಿ ಸೌರಶಕ್ತಿಯ ಬಳಕೆ, ಪ್ರಯೋಜನಗಳನ್ನು ಕಂಡು ಅಚ್ಚರಿಗೊಂಡ ಅವರು ಮುಂದೆ ಸೌರಶಕ್ತಿಯ ಕುರಿತು ವಿಶೇಷ ಅಧ್ಯಯನ ನಡೆಸಿ ಅದೇ ವಿ?ಯದಲ್ಲಿ ಡಾಕ್ಟರೇಟ್ ಪದವಿ ಪಡೆದರು. ವಿದೇಶದಲ್ಲಿ ಡಾಕ್ಟರೇಟ್ ಗಳಿಸಿದರೂ ಬಹುತೇಕರಂತೆ ಅಲ್ಲೇ ಉಳಿದುಹೋಗದೆ ಭಾರತಕ್ಕೆ ಮರಳಿದ ಹಂದೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸೌರಶಕ್ತಿಯಿಂದ ವಿದ್ಯುತ್ ಮತ್ತು ಇತರ ಉಪಯೋಗಗಳ ಕುರಿತು ಸಂಶೋಧನೆ ಆರಂಭಿಸಿದರು. ಅವರ ಹಲವು ವರ್ಷಗಳ ಸಂಶೋಧನೆ, ಕನಸುಗಳ ಪರಿಣಾಮವಾಗಿ ಆರಂಭಗೊಂಡಿದ್ದು ಅವರ ’ಸೆಲ್ಕೊ ಇಂಡಿಯಾ ಕಂಪನಿ’. ದೇಶದ ಬಡಜನರ ಕುರಿತ ಅವರ ಕಾಳಜಿ ವಿಶೇಷವಾದದ್ದು, ಹಾಗಾಗಿಯೇ ಸೆಲ್ಕೊ ಬಡಜನರಿಗಾಗಿಯೇ ಅತ್ಯಂತ ಕಡಿಮೆ ವೆಚ್ಚದ ಸೌರ ವಿದ್ಯುತ್ ಉಪಕರಣಗಳನ್ನು ಉತ್ಪಾದಿಸುತ್ತಿದೆ. ಸೌರಶಕ್ತಿಯ ವಿದ್ಯುತ್ ಅನ್ನು ಬಡವರಿಗೆ ತಲುಪಿಸುವುದು, ಅದಕ್ಕೆ ಹಲವಾರು ಬ್ಯಾಂಕ್‌ಗಳು ಹಾಗೂ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸಹಾಯ ನೀಡುವುದು, ಆ ಆರ್ಥಿಕ ಸಹಾಯ ತೀರುವವರೆಗೂ ಅದು ಅವರಿಗೆ ಹೊರೆಯಾಗದಂತೆ ಬೆಂಬಲ ನೀಡುವುದು, ಒಟ್ಟಾರೆಯಾಗಿ ಭಾರತದ ಬಡ ಗ್ರಾಮೀಣ ರೈತರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸೌರವಿದ್ಯುತ್‌ನ ಪ್ರಯೋಜನಗಳು ತಲುಪುವಂತೆ ಮಾಡುವುದು ಸೆಲ್ಕೊನ ಪ್ರಮುಖ ಉದ್ದೇಶ.</p>
<p>ಡಾ||ಹರೀಶ್‌ರ ದೂರದೃಷ್ಟಿತ್ವದಿಂದಾಗಿ ಸೆಲ್ಕೊ ಈ ಕಾರ್ಯದಲ್ಲಿ ಅಪರಿಮಿತ ಯಶಸ್ಸು ಗಳಿಸಿದೆ. ಕರ್ನಾಟಕ, ಕೇರಳ, ಗುಜರಾತ್ ರಾಜ್ಯಗಳ ೮೦ ಸಾವಿರಕ್ಕೂ ಅಧಿಕ ಬಡ ಹಾಗೂ ಮಧ್ಯಮ ವರ್ಗದ ಗ್ರಾಮೀಣ ರೈತರು ಸೌರಶಕ್ತಿಯ ವಿದ್ಯುತ್ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ೨೦೦೫ ರ ’ಆಶ್‌ಡೆನ್ ಅವಾರ್ಡ್’ ಪ್ರಶಸ್ತಿಗೆ ಭಾಜನರಾಗಿರುವ ಡಾ|| ಹರೀಶ್ ಹಂದೆ ದೇಶದ ೧೦ ಲಕ್ಷಕ್ಕೂ ಅಧಿಕ ಮಂದಿಗೆ ಈ ಪ್ರಯೋಜನಗಳನ್ನು ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.</p>
<p>ಸದ್ದಿಲ್ಲದೆ ’ಭಾರತ’ ಕಟ್ಟುತ್ತಿರುವ ಇಂತಹ ಲಕ್ಷಾಂತರ ಮಹನೀಯರಿಗೆ ನಮ್ಮ ನಮನ.</p>
]]></content:encoded>
			<wfw:commentRss>http://www.chaitrarashmi.com/editorial/%e0%b2%b8%e0%b2%a6%e0%b3%8d%e0%b2%a6%e0%b2%bf%e0%b2%b2%e0%b3%8d%e0%b2%b2%e0%b2%a6%e0%b3%86-%e0%b2%ad%e0%b2%be%e0%b2%b0%e0%b2%a4-%e0%b2%95%e0%b2%9f%e0%b3%8d%e0%b2%9f%e0%b3%81%e0%b2%a4%e0%b3%8d/feed</wfw:commentRss>
		</item>
		<item>
		<title>ಚಿತ್ರ ಸಂಗ್ರಹ</title>
		<link>http://www.chaitrarashmi.com/photogallery/%e0%b2%9a%e0%b2%bf%e0%b2%a4%e0%b3%8d%e0%b2%b0-%e0%b2%b8%e0%b2%82%e0%b2%97%e0%b3%8d%e0%b2%b0%e0%b2%b9</link>
		<comments>http://www.chaitrarashmi.com/photogallery/%e0%b2%9a%e0%b2%bf%e0%b2%a4%e0%b3%8d%e0%b2%b0-%e0%b2%b8%e0%b2%82%e0%b2%97%e0%b3%8d%e0%b2%b0%e0%b2%b9#comments</comments>
		<pubDate>Thu, 27 Nov 2008 19:28:22 +0000</pubDate>
		<dc:creator>ರಾಚಂ</dc:creator>
		
		<category><![CDATA[ಚಿತ್ರ ಸಂಗ್ರಹ]]></category>

		<guid isPermaLink="false">http://www.chaitrarashmi.com/?p=406</guid>
		<description><![CDATA[೪ ನೇ ವರ್ಷ ಸಂಭ್ರಮ : ಸಭಾ ಕಾರ್ಯಕ್ರಮಗಳುಚೈತ್ರರಶ್ಮಿ : ೪ ನೇ ವರ್ಷ ಸಂಭ್ರಮ : ಸಭಾ ಕಾರ್ಯಕ್ರಮಗಳುbengaluru15 photos೪ ನೇ ವರ್ಷ ಸಂಭ್ರಮ : ಸಾಂಸ್ಕೃತಿಕ ಕಾರ್ಯಕ್ರಮಗಳುಚೈತ್ರರಶ್ಮಿ  : ೪ ನೇ ವರ್ಷ ಸಂಭ್ರಮ : ಸಾಂಸ್ಕೃತಿಕ ಕಾರ್ಯಕ್ರಮಗಳುBengaluru15 photosಚೈತ್ರರಶ್ಮಿಸೃಜನಶೀಲತೆಯ ಹುಡುಕಾಟದಲ್ಲಿ  ಚೈತ್ರರಶ್ಮಿ  : A Ray Of HopeBangalore1 photo&#160;]]></description>
			<content:encoded><![CDATA[<table cellpadding="0" cellspacing="0" border="0" width="100%" id="kpg-albums"><tr><td width='50%'><a href='http://www.chaitrarashmi.com/photogallery/%e0%b2%9a%e0%b2%bf%e0%b2%a4%e0%b3%8d%e0%b2%b0-%e0%b2%b8%e0%b2%82%e0%b2%97%e0%b3%8d%e0%b2%b0%e0%b2%b9?album=XrhcTJ'><img src='http://lh5.ggpht.com/-cPR3H9zT4w4/STOwb3zz3uE/AAAAAAAAAFg/msxUC_g52GA/s160-c/XrhcTJ.jpg' height='160' width='160' alt='೪ ನೇ ವರ್ಷ ಸಂಭ್ರಮ : ಸಭಾ ಕಾರ್ಯಕ್ರಮಗಳು' class='kpg-thumb kpg-thumb-multiplePerRow' /></a><div class='kpg-title'><a href='http://www.chaitrarashmi.com/photogallery/%e0%b2%9a%e0%b2%bf%e0%b2%a4%e0%b3%8d%e0%b2%b0-%e0%b2%b8%e0%b2%82%e0%b2%97%e0%b3%8d%e0%b2%b0%e0%b2%b9?album=XrhcTJ'>೪ ನೇ ವರ್ಷ ಸಂಭ್ರಮ : ಸಭಾ ಕಾರ್ಯಕ್ರಮಗಳು</a></div><div class='kpg-summary'>ಚೈತ್ರರಶ್ಮಿ : ೪ ನೇ ವರ್ಷ ಸಂಭ್ರಮ : ಸಭಾ ಕಾರ್ಯಕ್ರಮಗಳು</div><div class='kpg-location'>bengaluru</div><div class='kpg-nbPhotos'>15 photos</div></td><td width='50%'><a href='http://www.chaitrarashmi.com/photogallery/%e0%b2%9a%e0%b2%bf%e0%b2%a4%e0%b3%8d%e0%b2%b0-%e0%b2%b8%e0%b2%82%e0%b2%97%e0%b3%8d%e0%b2%b0%e0%b2%b9?album=rOFQSD'><img src='http://lh3.ggpht.com/-UEz4JFHZP6g/STOzXtkqAXE/AAAAAAAAAHk/ygr91jBbpxc/s160-c/rOFQSD.jpg' height='160' width='160' alt='೪ ನೇ ವರ್ಷ ಸಂಭ್ರಮ : ಸಾಂಸ್ಕೃತಿಕ ಕಾರ್ಯಕ್ರಮಗಳು' class='kpg-thumb kpg-thumb-multiplePerRow' /></a><div class='kpg-title'><a href='http://www.chaitrarashmi.com/photogallery/%e0%b2%9a%e0%b2%bf%e0%b2%a4%e0%b3%8d%e0%b2%b0-%e0%b2%b8%e0%b2%82%e0%b2%97%e0%b3%8d%e0%b2%b0%e0%b2%b9?album=rOFQSD'>೪ ನೇ ವರ್ಷ ಸಂಭ್ರಮ : ಸಾಂಸ್ಕೃತಿಕ ಕಾರ್ಯಕ್ರಮಗಳು</a></div><div class='kpg-summary'>ಚೈತ್ರರಶ್ಮಿ  : ೪ ನೇ ವರ್ಷ ಸಂಭ್ರಮ : ಸಾಂಸ್ಕೃತಿಕ ಕಾರ್ಯಕ್ರಮಗಳು</div><div class='kpg-location'>Bengaluru</div><div class='kpg-nbPhotos'>15 photos</div></td></tr><tr><td width='50%'><a href='http://www.chaitrarashmi.com/photogallery/%e0%b2%9a%e0%b2%bf%e0%b2%a4%e0%b3%8d%e0%b2%b0-%e0%b2%b8%e0%b2%82%e0%b2%97%e0%b3%8d%e0%b2%b0%e0%b2%b9?album=IMzOgH'><img src='http://lh5.ggpht.com/-mu-UkqEz7Dk/SS-LQpSwuUE/AAAAAAAAABQ/inA2hVoW29c/s160-c/IMzOgH.jpg' height='160' width='160' alt='ಚೈತ್ರರಶ್ಮಿ' class='kpg-thumb kpg-thumb-multiplePerRow' /></a><div class='kpg-title'><a href='http://www.chaitrarashmi.com/photogallery/%e0%b2%9a%e0%b2%bf%e0%b2%a4%e0%b3%8d%e0%b2%b0-%e0%b2%b8%e0%b2%82%e0%b2%97%e0%b3%8d%e0%b2%b0%e0%b2%b9?album=IMzOgH'>ಚೈತ್ರರಶ್ಮಿ</a></div><div class='kpg-summary'>ಸೃಜನಶೀಲತೆಯ ಹುಡುಕಾಟದಲ್ಲಿ  ಚೈತ್ರರಶ್ಮಿ  : A Ray Of Hope</div><div class='kpg-location'>Bangalore</div><div class='kpg-nbPhotos'>1 photo</div></td></tr></table><div style="clear: both;" />&nbsp;</div>]]></content:encoded>
			<wfw:commentRss>http://www.chaitrarashmi.com/photogallery/%e0%b2%9a%e0%b2%bf%e0%b2%a4%e0%b3%8d%e0%b2%b0-%e0%b2%b8%e0%b2%82%e0%b2%97%e0%b3%8d%e0%b2%b0%e0%b2%b9/feed</wfw:commentRss>
		</item>
		<item>
		<title>ಸ್ನೇಹಮಿಲನ</title>
		<link>http://www.chaitrarashmi.com/samvada/%e0%b2%b8%e0%b3%8d%e0%b2%a8%e0%b3%87%e0%b2%b9%e0%b2%ae%e0%b2%bf%e0%b2%b2%e0%b2%a8</link>
		<comments>http://www.chaitrarashmi.com/samvada/%e0%b2%b8%e0%b3%8d%e0%b2%a8%e0%b3%87%e0%b2%b9%e0%b2%ae%e0%b2%bf%e0%b2%b2%e0%b2%a8#comments</comments>
		<pubDate>Wed, 17 Sep 2008 12:31:58 +0000</pubDate>
		<dc:creator>ರಾಚಂ</dc:creator>
		
		<category><![CDATA[ಸಾಹಿತ್ಯ ಸಂವಾದ]]></category>

		<category><![CDATA[ಸ್ನೇಹಮಿಲನ]]></category>

		<guid isPermaLink="false">http://www.chaitrarashmi.com/?p=371</guid>
		<description><![CDATA[ಸಹೃದಯರ ಸಮಾಗಮ  ಮತ್ತು ಆಪ್ತಸಂವಾದ 
ಅಘನಾಶಿನಿಯ ಮಡಿಲಲ್ಲಿ  ಸ್ನೇಹಮಿಲನ,  ಸಂಭ್ರಮ
 
’ಚೈತ್ರರಶ್ಮಿ’  ಯಂತಹ ಪುಟ್ಟ  ಪತ್ರಿಕೆಯನ್ನು  ಮೂರು ವರ್ಷ ನಡೆಸಿದ್ದೇ  ದೊಡ್ಡ ಸಾಧನೆ  ಅಂತ ನಾನಂತೂ  ಅಂದುಕೊಳ್ಳುವುದಿಲ್ಲ.  ಆದರೆ ನಮ್ಮ ನೂರೆಂಟು  ಹಳವಂಡಗಳ ಮಧ್ಯೆಯೂ  ಈ ಪುಟ್ಟ ಭಾವಯಾನದ  ಹೆಸರಿನಲ್ಲಿ  ಒಂದಷ್ಟು ಜನ  ಸಹೃದಯರು, ಸಮಾನಾಸಕ್ತರು,  ಭಾವಜೀವಿಗಳು,  ಸಾಹಿತ್ಯ ಪ್ರೇಮಿಗಳು  ತಮ್ಮದೇ [...]]]></description>
			<content:encoded><![CDATA[<p style="margin: 0.0001pt; text-align: left;"><strong><span style="font-family: Tunga; color: #000000;">ಸಹೃದಯರ ಸಮಾಗಮ  ಮತ್ತು ಆಪ್ತಸಂವಾದ </span></strong></p>
<p style="margin: 0.0001pt; text-align: left;"><strong><span style="font-family: Tunga; color: #000000;">ಅಘನಾಶಿನಿಯ ಮಡಿಲಲ್ಲಿ  ಸ್ನೇಹಮಿಲನ,  ಸಂಭ್ರಮ</span></strong></p>
<p style="margin: 0.0001pt; text-align: left;"><span style="font-family: Tunga; color: #000000;"> </span></p>
<p style="margin: 0.0001pt; text-align: left;"><span style="font-family: Tunga; color: #000000;">’ಚೈತ್ರರಶ್ಮಿ’  ಯಂತಹ ಪುಟ್ಟ  ಪತ್ರಿಕೆಯನ್ನು  ಮೂರು ವರ್ಷ ನಡೆಸಿದ್ದೇ  ದೊಡ್ಡ ಸಾಧನೆ  ಅಂತ ನಾನಂತೂ  ಅಂದುಕೊಳ್ಳುವುದಿಲ್ಲ.  ಆದರೆ ನಮ್ಮ ನೂರೆಂಟು  ಹಳವಂಡಗಳ ಮಧ್ಯೆಯೂ  ಈ ಪುಟ್ಟ ಭಾವಯಾನದ  ಹೆಸರಿನಲ್ಲಿ  ಒಂದಷ್ಟು ಜನ  ಸಹೃದಯರು, ಸಮಾನಾಸಕ್ತರು,  ಭಾವಜೀವಿಗಳು,  ಸಾಹಿತ್ಯ ಪ್ರೇಮಿಗಳು  ತಮ್ಮದೇ ಒಂದು  ಬಳಗ ಕಟ್ಟಿಕೊಂಡರಲ್ಲಾ  ಅದು ನಿಜಕ್ಕೂ  ಸಂಭ್ರಮದ ಸಂಗತಿ.  ಚೈತ್ರರಶ್ಮಿ  ಈ ೩ ವರ್ಷಗಳಲ್ಲಿ  ಅನೇಕ ಸಮಸ್ಯೆ,  ಸವಾಲುಗಳನ್ನೆದುರಿಸಿದೆ  ನಿಜ. ಆದರೆ ಅವೆಲ್ಲದರ  ಆಚೆ ಪತ್ರಿಕೆಗಾಗಿ  ಕಾಯುವ, ಪತ್ರಿಕೆ  ಸಿಕ್ಕಾಗ ಸಂಭ್ರಮಿಸುವ  ಒಂದು ಸಹೃದಯಿ  ಓದುಗ ವರ್ಗ ಚೈತ್ರರಶ್ಮಿಗಿದೆ  ಅನ್ನೋದೆ ನಮ್ಮೆಲ್ಲ  ಪ್ರಯತ್ನಗಳ ಸಾರ್ಥಕತೆ.  ಚೈತ್ರರಶ್ಮಿ  ಬಳಗದ ನಮ್ಮೆಲ್ಲ  ಮಿತ್ರರ ನಡುವಿನ  ಅಕ್ಕರೆ, ಆತ್ಮೀಯತೆಗಳನ್ನು  ಇನ್ನಷ್ಟು ಸದೃಢಗೊಳಿಸುವ,  ಸಮ್ಮಿಲನಗೊಳಿಸುವ  ಪ್ರಯತ್ನವೇ ’ಸ್ನೇಹಮಿಲನ’.  ಆದರೆ ’ಸ್ನೇಹಮಿಲನ’  ವೆಂದರೆ ನಾಲ್ಕಾರು  ಮಿತ್ರರು ಸೇರುವ  ಸ್ನೇಹಕೂಟವಷ್ಟೇ  ಅಲ್ಲ ಅಥವಾ ಚೈತ್ರರಶ್ಮಿಯ  ಕುರಿತಾದ ಕೇವಲ  ಒಂದಷ್ಟು ಮಾತುಕತೆಯಲ್ಲ.  ಚೈತ್ರರಶ್ಮಿಯ  ಪ್ರಮುಖ ಚಿಂತನೆಗಳಾದ  ಸಾಹಿತ್ಯ, ಸೃಜನಶೀಲತೆ,  ದೇಶಭಕ್ತಿಯು  ಸೇರಿದಂತೆ ಪ್ರಸ್ತುತ  ಸಾಮಾಜಿಕ, ಸಾಂಸ್ಕೃತಿಕ  ವಿದ್ಯಮಾನಗ ಆತಂಕಗಳ,  ಸಂಭ್ರಮಗಳ, ಸವಾಲುಗಳ  ಚಿಂತನ - ಮಂಥನ.  ಚೈತ್ರರಶ್ಮಿಯ  ಉತ್ತರಕನ್ನಡ  ಬಳಗ ಆಯೋಜಿಸುತ್ತಿರುವ  ಈ ಮೊದಲ ’ಸ್ನೇಹಮಿಲನ’  ಮುಂದಿನ ದಿನಗಳಲ್ಲಿ  ಬಳಗದ ಇತರೆಡೆಯಲ್ಲೂ  ಆಯೋಜನೆಗೊಂಡು  ಒಂದು ಆರೋಗ್ಯಕರ  ಚರ್ಚೆಗೆ ನಾಂದಿ  ಹಾಡಿ ಆ ಮೂಲಕ  ಸೃಜನಶೀಲರೆಲ್ಲರ  ಚಿಂತನೆಗಳಿಗೆ  ಮೆರುಗು ತುಂಬಲಿ  ಎನ್ನುವುದು ಚೈತ್ರರಶ್ಮಿಯ  ಆಶಯ.</span></p>
<p style="margin: 0.0001pt; text-align: left;"><span style="font-family: Tunga; color: #000000;"> </span></p>
<p style="margin: 0.0001pt; text-align: left;"><span style="font-family: Tunga; color: #000000;">’ಸಜ್ಜನರ ಸಂಗವದು  ಹೆಜ್ಜೇನು ಸವಿದಂತೆ’  ಎಂಬ ಮಾತಿದೆ.  ಚೈತ್ರರಶ್ಮಿಯೆಂಬ  ಭಾವಯಾನದ ಸಹವಾಸಕ್ಕೆ  ಬಿದ್ದ ಒಂದಷ್ಟು  ಸಜ್ಜನ ಮಿತ್ರರು  ಆ ಸಂಭ್ರಮದ ಸ್ನೇಹಮಿಲನಕ್ಕೆ  ನಾಂದಿ ಹಾಡಿದ್ದಾರೆ.  ಅವರೆಲ್ಲರೊಂದಿಗೆ  ಅಕ್ಕರೆಯ ಆತ್ಮೀಯತೆಯ  ಸಂವಾದದ ಸವಿಜೇನು  ಸವಿಯಲು ನಾನು  ಹೋಗುತ್ತಿದ್ದೇನೆ.  ನವೆಂಬರ್ ೪ ರಂದು  ಶಿರಸಿಯ ಟಿ.ಎಸ್.ಎಸ್.  ಹಾಸ್ಟೆಲ್ ಸಭಾಂಗಣದಲ್ಲಿ  ಆ ಸಂಭ್ರಮದ ಕ್ಷಣಗಳಿಗೆ  ಸಾಕ್ಷಿಯಾಗಲ  ನೀವೂ ಅಲ್ಲಿರುತ್ತೀರಿ  ಎಂಬ ನಂಬಿಕೆ  ಹಾರೈಕೆ ನನ್ನದು. </span></p>
<p><span style="font-family: Tunga; color: #000000;"> </span></p>
]]></content:encoded>
			<wfw:commentRss>http://www.chaitrarashmi.com/samvada/%e0%b2%b8%e0%b3%8d%e0%b2%a8%e0%b3%87%e0%b2%b9%e0%b2%ae%e0%b2%bf%e0%b2%b2%e0%b2%a8/feed</wfw:commentRss>
		</item>
		<item>
		<title>’ಮದುವೆ’ -ಬಂಧವೋ,ಬಂಧನವೋ?</title>
		<link>http://www.chaitrarashmi.com/chavadi/%e2%80%99%e0%b2%ae%e0%b2%a6%e0%b3%81%e0%b2%b5%e0%b3%86%e2%80%99-%e0%b2%ac%e0%b2%82%e0%b2%a7%e0%b2%b5%e0%b3%8b%e0%b2%ac%e0%b2%82%e0%b2%a7%e0%b2%a8%e0%b2%b5%e0%b3%8b</link>
		<comments>http://www.chaitrarashmi.com/chavadi/%e2%80%99%e0%b2%ae%e0%b2%a6%e0%b3%81%e0%b2%b5%e0%b3%86%e2%80%99-%e0%b2%ac%e0%b2%82%e0%b2%a7%e0%b2%b5%e0%b3%8b%e0%b2%ac%e0%b2%82%e0%b2%a7%e0%b2%a8%e0%b2%b5%e0%b3%8b#comments</comments>
		<pubDate>Wed, 17 Sep 2008 12:30:09 +0000</pubDate>
		<dc:creator>ರಾಚಂ</dc:creator>
		
		<category><![CDATA[ಚರ್ಚೆಗೊಂದು ಚಾವಡಿ]]></category>

		<category><![CDATA[ಚರ್ಚೆ]]></category>

		<category><![CDATA[ಚೈತ್ರ ರಶ್ಮಿ]]></category>

		<category><![CDATA[ಮದುವೆ]]></category>

		<guid isPermaLink="false">http://www.chaitrarashmi.com/?p=365</guid>
		<description><![CDATA[
-	ಸುಧಾ. ಎಂ  ಕರ್ಕಿಸವಲು
ಚೈತ್ರರಶ್ಮಿಯ  ಜುಲೈ ಸಂಚಿಕೆಯಲ್ಲಿ  ಮಹಾಬಲಭಟ್ ಅವರು  ಮದುವೆಯ ಕುರಿತು  ’ಬಂಧನವದೇನಲ್ಲ-ಜೀವ 
ಜೀವ ಪ್ರೇಮ’  ಎಂದು ವ್ಯಾಖ್ಯಾನಿಸಿದ್ದರು.  ಆ ಚರ್ಚೆಯ ಮುಂದುವರೆದ  ಭಾಗವಾಗಿ ಸುಧಾ.ಎಂ  ಅವರು ಮದುವೆಯ  ಕುರಿತ ತಮ್ಮ  ಭಾವನೆಗಳನ್ನು  ಇಲ್ಲಿ ಹಂಚಿಕೊಂಡಿದ್ದಾರೆ. 

 
ಗಂಡು-ಹೆಣ್ಣಿನ  ಮಿಲನದ ಕುರಿತು  ಹಿರಿಯರ, ಅನುಭವಸ್ಥರ  ನುಡಿಯೇ ಚೆನ್ನವೆನಿಸುತ್ತದೆ.  ಏಕೆಂದರೆ ಸಂತೃಪ್ತ  ಜೀವನ ಉಂಡ [...]]]></description>
			<content:encoded><![CDATA[<p style="margin: 0.0001pt; text-align: left;"><img class="alignleft size-medium wp-image-366" title="’ಮದುವೆ’ -ಬಂಧವೋ,ಬಂಧನವೋ? " src="http://www.chaitrarashmi.com/wp-content/uploads/2008/09/untitled6.bmp" alt="" /></p>
<p style="margin: 0.0001pt; text-align: right;"><strong><span style="font-family: Tunga; color: #000000;">-	ಸುಧಾ. ಎಂ  ಕರ್ಕಿಸವಲು</span></strong></p>
<p style="margin: 0.0001pt; text-align: left;"><strong><span style="font-family: Tunga; color: #000000;">ಚೈತ್ರರಶ್ಮಿಯ  ಜುಲೈ ಸಂಚಿಕೆಯಲ್ಲಿ  ಮಹಾಬಲಭಟ್ ಅವರು  ಮದುವೆಯ ಕುರಿತು  ’ಬಂಧನವದೇನಲ್ಲ-ಜೀವ </span></strong></p>
<p style="margin: 0.0001pt; text-align: left;"><strong><span style="font-family: Tunga; color: #000000;">ಜೀವ ಪ್ರೇಮ’  ಎಂದು ವ್ಯಾಖ್ಯಾನಿಸಿದ್ದರು.  ಆ ಚರ್ಚೆಯ ಮುಂದುವರೆದ  ಭಾಗವಾಗಿ ಸುಧಾ.ಎಂ  ಅವರು ಮದುವೆಯ  ಕುರಿತ ತಮ್ಮ  ಭಾವನೆಗಳನ್ನು  ಇಲ್ಲಿ ಹಂಚಿಕೊಂಡಿದ್ದಾರೆ. </span></strong></p>
<p style="margin: 0.0001pt; text-align: left;"><img class="alignleft size-medium wp-image-367" title="’ಮದುವೆ’ -ಬಂಧವೋ,ಬಂಧನವೋ? " src="http://www.chaitrarashmi.com/wp-content/uploads/2008/09/untitled7.bmp" alt="" /></p>
<p style="margin: 0.0001pt; text-align: left;"><span style="font-family: Tunga; color: #000000;"> </span></p>
<p style="margin: 0.0001pt; text-align: left;"><span style="font-family: Tunga; color: #000000;">ಗಂಡು-ಹೆಣ್ಣಿನ  ಮಿಲನದ ಕುರಿತು  ಹಿರಿಯರ, ಅನುಭವಸ್ಥರ  ನುಡಿಯೇ ಚೆನ್ನವೆನಿಸುತ್ತದೆ.  ಏಕೆಂದರೆ ಸಂತೃಪ್ತ  ಜೀವನ ಉಂಡ ಅವರ  ಬದುಕಲ್ಲಿ ಕಾಮ-  ಪ್ರೇಮ ಇವೆರೆಡೇ  ಜೀವನವಾಗಿರಲಿಲ್ಲ.  ಸುಖ ದಾಂಪತ್ಯಕ್ಕೆ  ಬೇಕಾಗಿದ್ದು  ದೈಹಿಕ, ಮಾನಸಿಕ,    ಅಧ್ಯಾತ್ಮಿಕ,  ಸಂಸ್ಕಾರದ ಮಾರ್ಗದರ್ಶನ. </span></p>
<p style="margin: 0.0001pt; text-align: left;"><span style="font-family: Tunga; color: #000000;">ಸಪ್ತಪದಿ ಜೋಡಿಯಾಗೇ  ತುಳಿತೇವೆ. ಅಂದ  ಮೇಲೆ ಅಲ್ಲಿ  ಸಮರಸ ಕೂಡಿರಬೇಕು.  ಸಂಕಟ ಬಂದಾಗ  ಹೆಂಡತಿಯನ್ನು  ದೂಷಿಸುತ್ತಾ,  ಸುಖವಿದ್ದಾಗ  ಲೋಲುಪತೆ ಮಗ್ನವಾದರೆ,  ಸಮರಸ ಬರಲು ಸಾಧ್ಯವಾ?  ಆನಂದವೆಂದರೆ  ದಿಢೀರ್ ಧುಮುಕುವ  ಜಲಪಾತವೆ? ಸಂಯಮ,  ತಾಳ್ಮೆ, ತ್ಯಾಗಗಳ  ನೀರೆರೆದು ಪ್ರೇಮದ  ಬಳ್ಳಿ ಆರೋಗ್ಯಕರವಾಗಿ  ಚಿಗುರಿ, ಬೆಳೆದು,  ಕಾಯಾಗಿ ಅನುಭವ  ಜ್ಞಾನಗಳ ಮೂಸೆಯಲ್ಲಿ  ಹಣ್ಣಾಗಿ ಸಿಗುವ  ರಸವೇ ಈ ಸುಖ.  ಸಪ್ತಪದಿಯ ಏಳನೆಯ  ಹೆಜ್ಜೆ - ಸಖಾಸಪ್ತಪದೀಭವ  - ಸ್ನೇಹಕ್ಕಾಗಿ  ಈ ಜೋಡಿಹೆಜ್ಜೆ  ಅಂದಾಗ ಮದುವೆಯ  ಜೀವಾಳವೇ ಸ್ನೇಹ.  ಮನಬಿಚ್ಚಿ ಚಿಂತನೆಗಳನ್ನು  ಹಂಚಿಕೊಳ್ಳುವ  ಪ್ರಾಮಾಣಿಕತೆ  ; ಲೋಪ - ದೋಷಗಳನ್ನು  ಇದ್ದಂತೆ ಒಪ್ಪಿಯು  ಬೇಸರಗೊಳ್ಳದಿರುವುದು;  ಸ್ವಯಂ ಸಮಾನತೆಯನ್ನು  ಪಾಲಿಸುವುದು;  ಯಾರೊಬ್ಬರ ದಬ್ಬಾಳಿಕೆಯಿಲ್ಲದೇ  ಏಕಕಾಲದಲ್ಲಿ  ಈ ಸ್ವಾತಂತ್ರ್ಯವನ್ನೂ,  ಪರಸ್ಪರರಿಗೆ  ಶರಣಾಗುವುದನ್ನು  ಅನುಭವಿಸುವ ಸ್ಥಿತಿ  ಈ ಸ್ನೇಹ. ಮಿತ್ರರಿಗಲ್ಲ,  ದಾಂಪತ್ಯದಲ್ಲಿ  ಇದು ಅನ್ವಯವಾಗಬೇಕು.  ಆಗ ಎರಡು ದೇಹಗಳ  ಮನಸ್ಸು ಸರಳ  ಸುಂದರ ಸುಭದ್ರವಾಗಿ  ಬೆಸೆಯಲು ಕಾರಣವಾಗುತ್ತದೆ.  ಯಾಕೆ ಯಾರೂ ವಿವಾಹಬಂಧನದ  ಬಗ್ಗೆ ಈ ರೀತಿ  ಯೋಚಿಸಲಾರರು?  ಕೇವಲ ದೈಹಿಕ  ಸುಖಕ್ಕೆ ಮದುವೆಯಾ?  ಮುಂದಿನ ಪೀಳಿಗೆಗಾಗಿ  ಈ ಶಾಸ್ತ್ರವಾ?  ಮಕ್ಕಳನ್ನು ಪಡೆಯಬೇಕೆಂಬ  ವಾಂಛೆಗೆ ಹೆಣ್ಣು  ಬೇಕಾ? ಎಷ್ಟೋ  ಗಂಡು ಮತ್ತು  ಹೆಣ್ಣಿನ ಮನಸ್ಥಿತಿಗಳು  ಹೀಗೆ. ಬಹುಶಃ  ೧೮-೨೦ ರ ಹರೆಯದಲ್ಲಿ ನನ್ನ  ಅಲೋಚನೆ ಕೂಡಾ  ಹಾಗೇ ಇತ್ತೇನೋ?  ಮದುವೆ ಬಂಧನ  ಅಲ್ಲವೆಂದು ಹೇಳಲು  ಸಾಧ್ಯವೆ? ಬಂಧನ  ಎಂಬುದು ಒಂದು  ಕೊಂಡಿ. ಕೊಂಡಿ  ಕೂಡಿ ಇರುವಷ್ಟು  ಕಾಲ ಬಂಧನ. ಕೊಂಡಿ  ಕಳಚಿತೋ ಒಂಟಿತನ.  ಮುಸ್ಸಂಜೆ ಪಯಣದಲಿ  ಸಖೀಗೀತವಿದ್ದರೆಷ್ಟು  ಚೆನ್ನ. ಬಹುಶಃ  ಗಂಡಿಗೆ ಒಂಟಿತನ  ಕಾಡುವುದು ಬದುಕಿನ  ಸಂಧ್ಯಾಕಾಲದಲ್ಲಿ.  ಮಕ್ಕಳಿರಲಿ,  ಮೊಮ್ಮಕ್ಕಳಿರಲಿ,  ಸೊಸೆಯಿರಲಿ ಆದರೂ  ಹೆಂಡತಿ ತನ್ನ  ಜೊತೆಯಿರಬೇಕೆಂಬ  ಬಯಕೆ ಇದ್ದೇ  ಇರುತ್ತದೆ. </span></p>
<p style="margin: 0.0001pt; text-align: left;"><span style="font-family: Tunga; color: #000000;"> </span></p>
<p style="margin: 0.0001pt; text-align: left;"><span style="font-family: Tunga; color: #000000;">ನನಗೆ ತಿಳಿದ  ಮಟ್ಟಿಗೆ ನಮ್ಮ  ಹಳ್ಳಿಗಳಲ್ಲಿ  ಹೆಣ್ಣನ್ನ ಮನೆಕೆಲಸದ  ಹೊರತಾಗಿ ಸಾಮಾಜಿಕವಾಗಿ  ತನ್ನ ಕರ್ತವ್ಯ  ಮಾಡಲು ಎಡೆ ಮಾಡಿಕೊಡುವುದಿಲ್ಲ.  ಕೇವಲ ಮನೆಗೆ  ಮಾತ್ರವೇ ಸೀಮಿತಳು  ಎಂಬ ಭಾವನೆ ಇದೆ.  ತನ್ನ ಅಂಕೆಯಲ್ಲಿ  ತಾನಿದ್ದು ತಮ್ಮ  ಕೆಲಸ ನಿರ್ವಹಿಸಿಕೊಂಡು  ಹೋಗಬಲ್ಲಳಾದರೂ  ಹೆಣ್ಣನ್ನು ಅನುಮಾನದಿಂದಲೇ  ನೋಡಲಾಗುತ್ತದೆ.  ಯಾಕೆ? ಗಂಡ -  ಹೆಂಡತಿಯಲ್ಲಿ  ಪರಸ್ಪರ ಪ್ರೀತಿ  ವಿಶ್ವಾಸಕ್ಕೆ  ಬೆಲೆಯಿಲ್ಲವಾ?  ಕೇವಲ ಬೇಕು ಬೇಡ  ಇವುಗಳಿಗಾಗಿ  ಮದುವೆಯಾ? ಕೆಲವೊಮ್ಮೆ  ಇಂತ ವಿಚಾರಗಳೆಲ್ಲ </span></p>
<p style="margin: 0.0001pt; text-align: left;"><span style="font-family: Tunga; color: #000000;">ಬರುವಾಗ ಅಸಹ್ಯವಾಗುತ್ತದೆ.  ಕಾರಣ ಹೆಣ್ಣು  ಅಥವಾ ಗಂಡು ಇಬ್ಬರಲ್ಲೂ  ನೋಡುವ ದೃಷ್ಟಿ  ಒಂದು</span></p>
<p style="margin: 0.0001pt; text-align: left;"><span style="font-family: Tunga; color: #000000;">ರೀತಿಯ ವಾಂಛೆ.  ಹೆಣ್ಣು ಎಂದಾಕ್ಷಣ  ದೊಡ್ಡವಳಾದಂತೆ  ನಲವತ್ತು ವರ್ಷವಾದರೂ  ಬೇರೆ ದೃಷ್ಟಿ  ಕೋನದಿಂದ</span></p>
<p style="margin: 0.0001pt; text-align: left;"><span style="font-family: Tunga; color: #000000;">ನೋಡುತ್ತಾರಲ್ಲ.  ಎಷ್ಟೋ ಬಾರಿ  ಈ ಹೆಣ್ಣುಗಳೂ  ಹಾಗೆ ಭೃಂಗದ  ಹಿಡಿದು ಸಾಗುತ್ತವೆ.  ಇಷ್ಟೇನಾ ಈ</span></p>
<p style="margin: 0.0001pt; text-align: left;"><span style="font-family: Tunga; color: #000000;">ಬದುಕು ಎಂದರೆ&#8230;&#8230; </span></p>
<p style="margin: 0.0001pt; text-align: left;"><span style="font-family: Tunga; color: #000000;">ನಾನು ಬದುಕು  ನೋಡುವ ದೃಷ್ಟಿಕೋನವೇ  ಬೇರೆ. ಗಂಡ ಹೆಂಡತಿ  ಸಂಬಂಧವೆಂದರೆ  ಹೊರಲು ಹೆರಲಷ್ಟೇ  ಅಲ್ಲ. ಬಂಧನದೊಳಗೆ  ಕೂಡಿಡುವುದೂ  ಅಲ್ಲ. ಮನೆಕೆಲಸಕ್ಕೆ  ಸೀಮಿತವಲ್ಲ.  ಎಲ್ಲ ಕ್ಷೇತ್ರದಲ್ಲೂ  ಮಿಂಚಬೇಕು. ಕೊನೇ  ಪಕ್ಷ ತನಗೆ ಆಸಕ್ತಿಯಿರುವ  ಯಾವುದಾದರೂ ಒಂದು  ವಿಷಯದಲ್ಲಾದರೂ  ಗುರುತಿಸಿಕೊಳ್ಳಬೇಕು.  ಗಂಡನ ಹೆಸರಿನಡಿ  ನಮ್ಮ ಹೆಸರು  ವಿರಾಜಿಸುವುದಲ್ಲ.  ನಾವು ನಾವಾಗಿದ್ದು  ನಮ್ಮನ್ನು ಗುರುತಿಸಿಕೊಳ್ಳಬೇಕು.  ಅದವಳ ಸಾಧನೆ.  ಇನ್ನುಳಿದದ್ದು  ಸಾಮರಸ್ಯ, ಹೊಂದಾಣಿಕೆ,  ಸಹನೆಗಳಲ್ಲಿ  ಬದುಕು</span></p>
<p style="margin: 0.0001pt; text-align: left;"><span style="font-family: Tunga; color: #000000;">ರೂಢಿಸಿಕೊಳ್ಳುವುದು.  ಇದ್ದಿದ್ದರಲ್ಲೇ  ಸುಖ-ನೆಮ್ಮದಿ  ಕಂಡುಕೊಳ್ಳುವುದು.  ಇಲ್ಲದಿರುವುದಕ್ಕೆ  ಕೊರಗುತ್ತಾ ಶಾಂತಿ  ಕದಡಿಕೊಳ್ಳದಿರುವುದು.  ಸಂಸಾರ, ಮನೆಯೆಂದರೆ  ಅದೇ ಆಗಿರಬೇಕು.  ಅನ್ಯೋನ್ಯತೆಯೊಡನೆ,  ನಂಬಿಕೆಯೊಡನೆ  ಜೀವನ ನಡೆಸಬೇಕು.  ಈಗಿನ ಕಾಲದಲ್ಲಿ  ದಾಂಪತ್ಯವೆಂದರೆ  ಇಂದು ಮದುವೆಯಾಗಿ  ನಾಳೆ ಕೂಡಿ,  ನಾಡಿದ್ದು ಡೈವೋರ್ಸ್  ಪಡೆಯುವಲ್ಲಿಗೆ  ಹೋಗಿ ತಲುಪಿದೆ.  ಪರಸ್ಪರ ವಿಚಾರ  ವಿನಿಮಯವಾದರೂ  ನಡೆಯಬೇಕು. ಯಾವುದೂ  ಇರುವುದಿಲ್ಲ.  ಇದು ನನ್ನ ಅನಿಸಿಕೆ. </span></p>
<p style="margin: 0.0001pt; text-align: left;"><span style="font-family: Tunga; color: #000000;"> </span></p>
<p style="margin: 0.0001pt; text-align: left;"><span style="font-family: Tunga; color: #000000;">ನಾನು ಬಡವಿ,  ಆತ ಬಡವ. ಕವನದ  ಸಾಲಿನಂತೆ ಎಲ್ಲ  ಸಂದರ್ಭಗಳಲ್ಲೂ  ಸಮಾನ ಹಂಚಿಕೆಯಿರಲಿ.  ಸಮಾನ ಮನಸ್ಥಿತಿಯಿರಲಿ.  ಸಮರಸವಿರಲಿ.  ಒಬ್ಬರ ವಿಚಾರ  ಒಂದು ರೀತಿ ಮತ್ತೊಬ್ಬರ  ವಿಚಾರ ಇನ್ನೊಂದು  ರೀತಿಯಾಗಬಾರದು,  ಹೊಂದಿಕೆಯಿರಬೇಕು. </span></p>
<p style="margin: 0.0001pt; text-align: left;"><span style="font-family: Tunga; color: #000000;">ಇದು ನನ್ನ ಅನಿಸಿಕೆಯಷ್ಟೇ.  ಈ ವಿಷಯದ ಕುರಿತು  ಚೈತ್ರರಶ್ಮಿ  ಬಳಗದ ಮಿತ್ರರು  ತಮ್ಮ ಅಭಿಪ್ರಾಯವನ್ನು  ಬರೆದು ಈ ಚರ್ಚೆಯನ್ನು  ಮುಂದುವರಿಸುತ್ತಾರೆ  ಎಂದು ನಂಬುತ್ತೇನೆ. </span></p>
<p style="margin: 0.0001pt; text-align: left;"><span style="font-family: Tunga; color: #000000;"> </span></p>
]]></content:encoded>
			<wfw:commentRss>http://www.chaitrarashmi.com/chavadi/%e2%80%99%e0%b2%ae%e0%b2%a6%e0%b3%81%e0%b2%b5%e0%b3%86%e2%80%99-%e0%b2%ac%e0%b2%82%e0%b2%a7%e0%b2%b5%e0%b3%8b%e0%b2%ac%e0%b2%82%e0%b2%a7%e0%b2%a8%e0%b2%b5%e0%b3%8b/feed</wfw:commentRss>
		</item>
		<item>
		<title>: ಚೈತ್ರರಶ್ಮಿ ಪತ್ರಿಕೆ :</title>
		<link>http://www.chaitrarashmi.com/magazinedownload/chaitrarashmi</link>
		<comments>http://www.chaitrarashmi.com/magazinedownload/chaitrarashmi#comments</comments>
		<pubDate>Wed, 17 Sep 2008 12:28:04 +0000</pubDate>
		<dc:creator>ರಾಚಂ</dc:creator>
		
		<category><![CDATA[ಚೈತ್ರ ರಶ್ಮಿ ಪತ್ರಿಕೆ]]></category>

		<category><![CDATA[ಚೈತ್ರರಶ್ಮಿ]]></category>

		<guid isPermaLink="false">http://www.chaitrarashmi.com/?p=364</guid>
		<description><![CDATA[ಚೈತ್ರರಶ್ಮಿ ಪತ್ರಿಕೆಯನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :
March - April, 2010

March - April, 2010 - Printable Version
March  - April, 2010 - Readable Version

August - September, 2009

August - September, 2009 - Printable Version

June - July, 2009

June - July, 2009 - Printable Version

March-April, 2009

March-April, 2009 : Readable version



March-April, 2009 : Printable version

August, 2008

August 2008 : [...]]]></description>
			<content:encoded><![CDATA[<p>ಚೈತ್ರರಶ್ಮಿ ಪತ್ರಿಕೆಯನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :</p>
<p><strong>March - April, 2010</strong></p>
<ul>
<li><a href="http://www.chaitrarashmi.com/pdownloads/MAR - APRIL  10 - READ.pdf" target="_blank">March - April, 2010 - Printable Version</a></li>
<li><a href="http://www.chaitrarashmi.com/pdownloads/MAR - APRIL  10 - PRINT.pdf" target="_blank">March  - April, 2010 - Readable Version</a></li>
</ul>
<p><strong>August - September, 2009</strong></p>
<ul>
<li><a href="http://www.chaitrarashmi.com/wp-content/uploads/2009/12/aug-sept-2009-print.pdf">August - September, 2009 - Printable Version</a></li>
</ul>
<p><strong>June - July, 2009</strong></p>
<ul>
<li><a href="http://www.chaitrarashmi.com/wp-content/uploads/2009/12/june-july-09-print.pdf">June - July, 2009 - Printable Version</a></li>
</ul>
<p><strong>March-April, 2009</strong></p>
<ul>
<li><a href="http://www.chaitrarashmi.com/pdownloads/March_April_2009_Read.pdf" target="_blank">March-April, 2009 : Readable version<br />
</a></li>
</ul>
<ul>
<li><a href="http://www.chaitrarashmi.com/pdownloads/March_April_2009_Print.pdf" target="_blank">March-April, 2009 : Printable version</a></li>
</ul>
<p><strong>August, 2008</strong></p>
<ul>
<li><a href="http://www.chaitrarashmi.com/pdownloads/AUG - READ.pdf" target="_blank">August 2008 : Readable version<br />
</a></li>
</ul>
<ul>
<li><a href="http://www.chaitrarashmi.com/pdownloads/AUGUST -PRINT.pdf" target="_blank">August 2008 : Printable version</a></li>
</ul>
<p><strong>September 2008</strong></p>
<ul>
<li><a href="http://www.chaitrarashmi.com/pdownloads/SEPT - READ.pdf" target="_blank">September 2008 : Readable version<br />
</a></li>
</ul>
<ul>
<li><a href="http://www.chaitrarashmi.com/pdownloads/SEP - PRINT.pdf" target="_blank">September 2008 : Print</a><a href="http://www.chaitrarashmi.com/pdownloads/SEPT - READ.pdf" target="_blank">able version</a></li>
</ul>
<p><strong>October 2008</strong></p>
<ul>
<li><a href="http://www.chaitrarashmi.com/pdownloads/OCTO - READ.pdf" target="_blank">October2008 : Read</a><a href="http://www.chaitrarashmi.com/pdownloads/SEPT - READ.pdf" target="_blank">able version</a></li>
</ul>
<ul>
<li><a href="http://www.chaitrarashmi.com/pdownloads/OCTO - PRINT.pdf" target="_blank">October2008 : Print</a><a href="http://www.chaitrarashmi.com/pdownloads/SEPT - READ.pdf" target="_blank">able version</a></li>
</ul>
<p><strong>CHAITRARASHMI 50th Issue</strong></p>
<ul>
<li><a href="http://www.chaitrarashmi.com/pdownloads/50thissue.pdf" target="_blank">Download</a></li>
</ul>
<p style="margin: 0.0001pt; text-align: left;">
<p style="margin: 0.0001pt; text-align: left;"><span style="font-family: Tunga; color: #000000;">~~</span></p>
<p style="margin: 0.0001pt; text-align: left;"><span style="font-family: Tunga; color: #000000;">ರಾಮಚಂದ್ರ  ಹೆಗಡೆ. ಸಿ.  ಯಸ್. </span></p>
<p style="margin: 0.0001pt; text-align: left;"><strong>9986372503</strong></p>
<p style="margin: 0.0001pt; text-align: left;"><strong>editor@chaitrarashmi.com</strong></p>
<p style="margin: 0.0001pt; text-align: left;">
<p style="margin: 0.0001pt; text-align: left;"><span style="font-family: Tunga; color: #000000;"><strong>ವಿಳಾಸ:</strong> ನೆನಪು,  ನಂ: 33, </span></p>
<p style="margin: 0.0001pt; text-align: left;"><span style="font-family: Tunga; color: #000000;">3ನೇ  ಸಿ ಅಡ್ಡರಸ್ತೆ, </span></p>
<p style="margin: 0.0001pt; text-align: left;"><span style="font-family: Tunga; color: #000000;">ಕತ್ರಿಗುಪ್ಪೆ  ಮುಖ್ಯರಸ್ತೆ,  ವಿವೇಕಾನಂದ ನಗರ, </span></p>
<p style="margin: 0.0001pt; text-align: left;"><span style="font-family: Tunga; color: #000000;">ಬೆಂಗಳೂರು 85.</span></p>
<p style="text-align: center;"><span style="font-family: Tunga; color: #000000;"> </span></p>
]]></content:encoded>
			<wfw:commentRss>http://www.chaitrarashmi.com/magazinedownload/chaitrarashmi/feed</wfw:commentRss>
		</item>
	</channel>
</rss>

