December 31, 2010ಕಲಾತತ್ವ ಮಹರ್ಷಿ ಆನಂದ ಕುಮಾರಸ್ವಾಮಿ
- ಎಸ್. ಸೂರ್ಯಪ್ರಕಾಶ ಪಂಡಿತ್
ಭಾರತೀಯ ಕಲಾಕೃತಿಗಳನ್ನು ಕಂಡು ವಿದೇಶಿಯರು ಅನಾಗರಿಕವೆಂದು ಮೂದಲಿಸುತ್ತಿದ್ದ ಕಾಲದಲ್ಲಿ , ಜಗತಿನ ಉಳಿದೆಲ್ಲ ಕಳಪ್ರಕಾರಗಳಿಗಿಂತ ಭಾರತೀಯ ಕಲೆ ಮಿಗಿಲಾದುದೆಂದು ನಿರೂಪಿಸಿದವರು ಕಲಾತತ್ವ ಮಹರ್ಷಿ ಆನಂದ ಕುಮಾರಸ್ವಾಮಿ.
ಬದುಕಿನ ಬಹುಭಾಗ ಭಾರತದಿಂದ ಹೊರಗೇ ಕಳೆದರೂ ಭಾರತೀಯ ಕಲೆ ಸಂಸ್ಕೃತಿಗಳ ಕುರಿತು ಪಶ್ಚಿಮ ದೇಶಗಳಲ್ಲಿ ಗೌರವವನ್ನೂ, ಅಭಿಮಾನವನ್ನೂ ಮೂಡಿಸಿದ ಕಲಾತಪಸ್ವಿ. ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳದೆ ಅದರ ಕುರಿತು ಅಪಾರ್ಥ ಕಲ್ಪಿಸುತ್ತಿದ್ದ ವಿಶ್ವವಿದ್ಯಾನಿಲಯಗಳ ವಿದ್ವಾಂಸರು ಹಾಗೂ ಪಾಶ್ಚಿಮಾತ್ಯ ವಿಮರ್ಶಕರಿಗೆ ಸೆಡ್ಡು ಹೊಡೆದು ಧರ್ಮ ಹಾಗೂ ಂ ತಿU [...]