September 15, 2008ಬದಲಾವಣೆ
- ಡಾ| ಪ್ರಶಾಂತ್ ಬಿ., ಮೈಸೂರು
ಅವಳ ದಿವ್ಯ ನಿರ್ಲಕ್ಷ್ಯದಿಂದ
ನಿರ್ಬಂಧವಿರದೆ ಸಾಗಬೇಕಿದ್ದ
ನನ್ನ ಅವಳ ಪ್ರೀತಿ
ನಿರ್ಮಲವಾಗಿದ್ದ ಒಲವು
ನೆರಳೇ ಸಿಗದ ಹಾಗೆ
ನಿರಾಕಾರವಾಗಿ ಹೋದಾಗ
ನಿಶ್ಯಬ್ದವಾಗಿ ಅತ್ತು
ನಿರಾಳವಾದ ಮನಸ್ಸುs
ನೆನಪುಗಳ ಅಲೆಯಲ್ಲಿ
ನಿರ್ಧಾರಗಳ ಮರೆಯಲ್ಲಿ
ನಗುನಗುತ ಸಾಗಿ
ನಡೆದಿದೆ ಅನ್ವೇಷಣೆ
ನಿಜದ ಮನದರಸಿಗಾಗಿ