November 20, 2010‘ಚೈತ್ರರಶ್ಮಿ ಪ್ರಕಾಶನ’ದ ವತಿಯಿಂದ ಹೊಸ ಕಥೆಗಾರರಿಗಾಗಿ ರಾಜ್ಯಮಟ್ಟದ ಸಣ್ಣ ಕಥಾ ಸ್ಪರ್ಧೆ
ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯಾಗಿ ರೂಪುಗೊಂಡಿರುವ ‘ಚೈತ್ರರಶ್ಮಿ’ ಮಾಸಪತ್ರಿಕೆಯು ತನ್ನ 6ನೇ ವರ್ಷಾಚರಣೆ ಅಂಗವಾಗಿ ‘ಚೈತ್ರರಶ್ಮಿ ಪ್ರಕಾಶನ’ದ ವತಿಯಿಂದ ಹೊಸ ಕಥೆಗಾರರಿಗಾಗಿ ರಾಜ್ಯಮಟ್ಟದ ಸಣ್ಣ ಕಥಾ ಸ್ಪರ್ಧೆ ಯನ್ನು ಆಯೋಜಿಸಿದೆ.
ಗ್ರಾಮೀಣ ಹಾಗೂ ಹೊಸ ಅವಕಾಶಗಳ ಹುಡುಕಾಟದಲ್ಲಿರುವ ಯುವ ಕಥೆಗಾರರನ್ನು ಪ್ರೋತ್ಸಾಹಿಸುವುದು ಈ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಉದ್ದೇಶ. ಆಯ್ಕೆಯಾದ ಉತ್ತಮ ಹತ್ತು ಕಥೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು. ಕಥೆಗಳು ಸ್ವತಂತ್ರವಾಗಿರಬೇಕು. ಬೇರೆಲ್ಲೂ ಪ್ರಕಟವಾಗಿರಕೂಡದು. ಆಸಕ್ತ ಕಥೆಗಾರರು 3000 ಪದಗಳ ಮಿತಿಯಲ್ಲಿ ಇರುವ ತಮ್ಮ ಕಥೆಯನ್ನು ಅಂಚೆ ಅಥವಾ ಈ ಮೈಲ್ [...]