• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಚಿಂತನ ರಶ್ಮಿ

    ಚಿಂತನ ರಶ್ಮಿ


    time September 15, 2008

    ಬೆಳ್ಳಂಬೆಳಿಗ್ಗೆ ವಧಾಸ್ಥಾನದಲ್ಲಿ ನಿಂತು….

    - ಸಂಜಯ್ ಭಟ್ ಬೆಣ್ಣೆ, ಶಿರಸಿ

    ಅಂದು ಬೆಳಿಗ್ಗೆ ಹಾಗಿತ್ತು. ರತ್ತ ತರ್ಪಣವನ್ನೇ ಬೆಳಗಿನ ಉಸಿರಾಗಿಸಿಕೊಂಡ ಕ್ಷೇತ್ರದಲ್ಲಿ ಕಾಲಿಡಬೇಕಾಗಿ ಬಂದಿದ್ದಕ್ಕೆ ಬಹುಶಃ ಜೀವನದ ಕೊನೆಯವರೆಗೂ ವಿಷಾದಿಸುತ್ತೇನೆ. ಕಣ್ಣಂಚಿನಲ್ಲಿ ಹನಿಕೂಡ ನೆನಪಾದಾಗಲೆಲ್ಲ ಸಾಂದ್ರಗಟ್ಟುತ್ತಲೇ ಇರುತ್ತದೆ. ಮಾನವನೆದೆಯಲಿ / ಆರದೆ ಉರಿಯಲಿ / ದೇವರು / ಹಚ್ಚಿದ ದೀಪ || [...]

    time September 15, 2008

    ಸಂಸ್ಕೃತಿಯ ಸಂರಕ್ಷಣೆಯ ಮೂಲಕ ರಾಷ್ಟ್ರೀಯ ಏಕತೆ

    -ಮಂಗಳಗೌರಿ.ಎಂ ಕಣಿಯೂರು, ದ.ಕ

    ನಮ್ಮ ಭಾರತೀಯ ಸಂಸ್ಕೃತಿ ಸನಾತನವಾದುದು, ಪ್ರಸಿದ್ಧವಾದುದು. ಪ್ರಸ್ತುತ ನಮ್ಮ ಮುಂದಿರುವ ಸಮಸ್ಯೆಗಳಿಗೂ, ಮುಖ್ಯವಾಗಿ ಏಕತೆಯ ಕೊರತೆಗೆ, ಪರಿಹಾರ ಸಂಸ್ಕೃತಿಯ ರಕ್ಷಣೆ. ರಾಷ್ಟ್ರೀಯತೆ, ವಿಶ್ವದೃಷ್ಟಿಗಳ ಸಮನ್ವಯವೂ ಸಂಸ್ಕೃತಿಯ ರಕ್ಷಣೆಯಿಂದ ಸಾಧ್ಯ ಎಂಬ ಚಿಂತನೆ ಮಂಡಿಸಿದ್ದಾರೆ ಮಂಗಳಗೌರಿ ಎಂ.

    ರಾಷ್ಟ್ರಕವಿ ಕುವೆಂಪು ಹೇಳಿದಂತೆ - ಅಸಂಖ್ಯ ಮನಸ್ಸುಗಳ ಸಮಷ್ಟಿಯಲ್ಲಿ [...]

    time September 15, 2008

    ಪ್ರೀತಿಯೆಂಬುದು ಪ್ರದರ್ಶನವಲ್ಲ:ಅದೊಂದು ಮಧುರ ಅನುಭೂತಿ

    - ಪ್ರಿಯಾ. ಎಂ. ಭಟ್ ಕಲ್ಲಬ್ಬೆ, ಕುಮಟಾ

    ಪ್ರೇಮವೊಂದು ಅದ್ಬುತ ’ಭಾವಯಾನ’. ಪ್ರೇಮವೆನ್ನುವುದು ಭಾವನೆಗಳಿಗೆ ಜೊತೆಗೂಡುವ ಒಂದು ಅನುಭೂತಿ. ವ್ಯಾಲೆಂಟೇನ್ಸ್ ಡೇ ಗೆ ಸೀಮಿತವಾಗುವ, ಊರು ಪಾರ್ಕು ಸುತ್ತುವ, ಸಿನಿಮಾ ಐಸ್‌ಕ್ರೀಮ್ ಗಳಲ್ಲಿ ಮುಗಿಯುವ ’ಐ‌ಔಗಿ‌ಇ’ ಗೂ ವಿಶ್ವಜನ್ಯವಾದ ಸೃಷ್ಟಿ ಸಂಕೇತವಾದ ಪ್ರೇಮಕ್ಕೂ ವ್ಯತ್ಯಾಸವಿದೆ.

    ’ಚೈತ್ರರಶ್ಮಿ’ ಯ ಭಾವಯಾನ ಹೀಗೊಂದು ಹೊಸ [...]

    time September 15, 2008

    ಮರುಳಮುನಿಯನು ನಾನು ಮಂಕುತಿಮ್ಮನ ತಮ್ಮ ……

    -ಮಹಾಬಲ ಭಟ್, ಗೋವಾ

    ಡಿ.ವಿ.ಜಿ.ಯವರ ಮರುಳಮುನಿಯನ ಕಗ್ಗದ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ಮಹಾಬಲ ಭಟ್.

    ಡಿ.ವಿ.ಜಿ. ಎಂದಾಕ್ಷಣ ನೆನಪಿಗೆ ಬರುವುದು ಅವರ ಮಂಕುತಿಮ್ಮನ ಕಗ್ಗ. ಕನ್ನಡದ ಭಗವದ್ಗೀತೆ ಎಂದೇ ಪ್ರಸಿದ್ಧವಾಗಿರುವ ಈ ಗ್ರಂಥ
    ಕನ್ನಡದಲ್ಲಿಯೇ ಅದ್ವಿತೀಯವಾದುದು. ಆದರೆ ಈ ಮಂಕುತಿಮ್ಮನಿಗೆ ಒಬ್ಬ ತಮ್ಮನಿದ್ದಾನೆ ಎನ್ನುವ ವಿಚಾರ ಪ್ರಾಯಃ [...]

    time September 15, 2008

    ಬಂಧನವದೇನಲ್ಲ ಜೀವ ಜೀವ ಪ್ರೇಮ

    -ಮಹಾಬಲ ಭಟ್

    ವಿವಾಹವೆನ್ನುವುದು ಬಂಧನವೇನಲ್ಲ ಎರಡು ಹೃದಯಗಳನ್ನು ಕೂಡಿಸುವ ಪ್ರೇಮಬೆಸುಗೆ. ವ್ಯಕ್ತಿ ಒಬ್ಬಂಟಿಯಾಗಿದ್ದಾಗ ಪರಿಪೂರ್ಣನಲ್ಲ. ಬೆರೆತಾಗಲೇ ಪೂರ್ಣ. ಇದಕ್ಕೆ ಅರ್ಧನಾರೀಶ್ವರನೇ ಸಾಕ್ಷಿ.

    ಬಂಧನವದೇನಲ್ಲ ಜೀವ ಜೀವ ಪ್ರೇಮ
    ಒಂದೆ ನಿಲೆ ಜೀವವರೆ ಬೆರೆತರಲೆ ಪೂರ್ಣ|
    ದುಂದುಗವನ್ ಅರೆಗಯ್ದು ಸಂತಸವನಿಮ್ಮಡಿಪ
    ಬಾಂಧವ್ಯ ದೈವಕೃಪೆ - ಮಂಕುತಿಮ್ಮ||

    ಮೊನ್ನೆ ನನ್ನ ಮದುವೆಯ ನಿಶ್ಚಿತಾರ್ಥದ ಮರುದಿನ ನನ್ನ ಸಹೋದ್ಯೋಗಿಯೊಬ್ಬರು [...]

    time September 15, 2008

    ಅಪ್ರತಿಮ ದಾರ್ಶನಿಕ ಡಿ. ವಿ. ಜಿ.

    - ಮಹಾಬಲ ಭಟ್, ಗೋವಾ

    ಡಿ.ವಿ.ಜಿ. ಎಂಬ ಮೂರಕ್ಷರಗಳಿಂದಲೇ ಪ್ರಸಿದ್ಧರಾದ ಡಾ| ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕನ್ನಡ ಸಾಹಿತ್ಯಕ್ಷೇತ್ರದ
    ಧ್ರುವ ನಕ್ಷತ್ರ. ತಮ್ಮ ಸರಳ ಸಾರ್ಥಕ ಜೀವನದಿಂದಲೂ, ಜೀವಂತವಾದ ಬರವಣಿಗೆಯಿಂದಲೂ, ತಮ್ಮ ದಾರ್ಶನಿಕ ದೃಷ್ಟಿಯಿಂದಲೂ ಕರ್ನಾಟಕದ ಇತಿಹಾಸದಲ್ಲೊಂದು ಅಚ್ಚಳಿಯದ ಸ್ಥಾನ ಪಡೆದುಕೊಂಡ ಮೇರುವ್ಯಕ್ತಿ ಇವರು. ಜೀವನದ ಅಮೂಲ್ಯ ಮರ್ಮವನ್ನು ಹೊರಗೆಡಹುವ, [...]

    time September 15, 2008

    ಆನಂದವಾತ್ಮಗುಣ ಮಂಕುತಿಮ್ಮ

    -ಮಹಾಬಲ ಭಟ್, ಗೋವಾ

    ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ |
    ಮಾನವಂ ಪ್ರಣಯದೊಳೊ ವೀರವಿಜಯದೊಳೋ |
    ಏನೋ ಎಂತೋ ಸಮಾಧಾನಗಳನರಸುತಿಹ |
    ನಾನಂದವಾತ್ಮ ಗುಣ - ಮಂಕುತಿಮ್ಮ|

    ಪ್ರತಿಯೊಬ್ಬ ಜೀವಿಯ ಪರಮೋದ್ದೇಶ ಆನಂದವೇ. ಜೀವನದಲ್ಲಿ ಆನಂದವನ್ನು ಅನುಭವಿಸಬೇಕು. ಕೊನೆಯಲ್ಲಿ ಆತ್ಯಂತಿಕವಾದ ಆನಂದವನ್ನು ಹೊಂದಬೇಕು ಎಂಬುದೇ ಜೀವನದ ಗುರಿ. ನಾವು ಮಾಡುತ್ತಿರುವ ದೊಂಬರಾಟಗಳೆಲ್ಲ ಈ ಆನಂದವನ್ನು [...]

    time September 15, 2008

    ಅಂತರಂಗವ ತಿದ್ದು ಮಂಕುತಿಮ್ಮ

    - ಮಹಾಬಲ ಭಟ್, ಗೋವಾ

    ಅಂತಾನು ಮಿಂತಾನುಮೆಂತೊ ನಿನಗಾದಂತೆ
    ಶಾಂತಿಯನು ನೀನರಸು ಮನ ಕೆರಳಿದಂದು
    ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು
    ಸ್ವಾಂತಮಂ ತಿದ್ದುತಿರು - ಮಂಕುತಿಮ್ಮ ||

    ಒಳ್ಳೆಯದಕ್ಕೆ ನಮ್ಮನ್ನೇ, ಕೆಟ್ಟದ್ದಕ್ಕೆ ಬೇರೆಯವರನ್ನು ಹೊಣೆಗಾರರನ್ನಾಗಿ ಮಾಡುವುದು ನಮ್ಮ ಅಭ್ಯಾಸ. ನಮ್ಮ ಜೀವನದಲ್ಲಿ ನಾವು ಎಡವಿದಾಗ ನಮಗೆ ವಿದ್ಯೆ ಕಲಿಸಿದ ಗುರುಗಳನ್ನೋ, ಬುದ್ಧಿ ಕಲಿಸಿದ ತಂದೆ ತಾಯಿಗಳನ್ನೋ [...]